News Karnataka Kannada
Thursday, May 02 2024
ಕ್ರೀಡೆ

ನಾಯಕತ್ವವನ್ನು ತೊರೆಯುವುದಾಗಿ ಹೇಳಿರುವುದು ವಿರಾಟ್ ಕೊಹ್ಲಿ ಅವರ ಸ್ವಂತ ನಿರ್ಧಾರವಾಗಿದೆ : ಸೌರವ್ ಗಂಗೂಲಿ

Virat Kohli 24082021
Photo Credit :

ನವದೆಹಲಿ : ‘ಟಿ-20 ವಿಶ್ವಕಪ್ ಬಳಿಕ ನಾಯಕತ್ವವನ್ನು ತೊರೆಯುವುದಾಗಿ ಹೇಳಿರುವುದು ವಿರಾಟ್ ಕೊಹ್ಲಿ ಅವರ ಸ್ವಂತ ನಿರ್ಧಾರವಾಗಿದೆ. ಕ್ರಿಕೆಟ್‌ ಮಂಡಳಿಯಿಂದ ಯಾವುದೇ ಒತ್ತಡವಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ.

ಕೊಹ್ಲಿ ನಾಯಕತ್ವ ತೊರೆಯುವ ಬಗ್ಗೆ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಗಂಗೂಲಿ, ‘ವಿರಾಟ್‌ ಕೊಹ್ಲಿ ಅವರು ನಾಯಕತ್ವದಿಂದ ಕೆಳಗಿಳಿಯುವ ಬಗ್ಗೆ ನಿರ್ಧರಿಸಿರುವುದನ್ನು ಕೇಳಿ ನನಗೆ ಆಶ್ಚರ್ಯವಾಯಿತು. ಇದು ಅವರು ಇಂಗ್ಲೆಂಡ್‌ ಸರಣಿ ಬಳಿಕ ತೆಗೆದುಕೊಂಡ ಸ್ವಂತ ತೀರ್ಮಾನವಾಗಿದೆ. ನಾವು (ಬಿಸಿಸಿಐ) ವಿರಾಟ್ ಜತೆ ನಾಯಕತ್ವದ ಬಗ್ಗೆ ಈವರೆಗೆ ಯಾವುದೇ ರೀತಿಯ ಮಾತುಕತೆ ನಡೆಸಿಲ್ಲ. ಜತೆಗೆ, ಅವರ ಮೇಲೆ ಯಾವುದೇ ಒತ್ತಡವನ್ನು ಹಾಕಿಲ್ಲ. ನಾನು ಒಬ್ಬ ಆಟಗಾರನಾಗಿದ್ದವನು. ಇತರೆ ಆಟಗಾರರ ಮೇಲೆ ಒತ್ತಡ ಹಾಕುವಂತಹ ಕೆಲಸ ಎಂದಿಗೂ ಮಾಡುವುದಿಲ್ಲ’ ಎಂದು ಹೇಳಿದ್ದಾರೆ.

‘ನಾಯಕರಾಗಿ ತಂಡವನ್ನು ಮುನ್ನಡೆಸುತ್ತಿರುವುದು ಒಂದು ಹಂತದವರೆಗೆ ಚೆನ್ನಾಗಿರುತ್ತದೆ. ಇದರಿಂದ ಸಾಕಷ್ಟು ಖ್ಯಾತಿ, ಗೌರವ ಪಡೆಯಬಹುದು. ಆದರೆ, ಒಬ್ಬ ಆಟಗಾರನಾಗಿ ಮಾನಸಿಕ ಮತ್ತು ದೈಹಿಕ ಒತ್ತಡಕ್ಕೆ ಒಳಗಾಗಬೇಕಾಗುತ್ತದೆ. ಇದು ಕೇವಲ ಎಂ.ಎಸ್‌.ಧೋನಿ ಅಥವಾ ವಿರಾಟ್ಗೆ ಸೀಮಿತವಲ್ಲ. ಭವಿಷ್ಯದಲ್ಲಿ ನಾಯಕರಾಗುವವರು ಸಹ ಒತ್ತಡ ಎದುರಿಸಬೇಕಾಗುತ್ತದೆ. ಇದು ಕಠಿಣ ಕೆಲಸ’ ಎಂದು ಗಂಗೂಲಿ ಹೇಳಿದ್ದಾರೆ.

‘ಧೋನಿ ಪ್ರಬುದ್ಧ ವ್ಯಕ್ತಿ’
‘ಟೀಮ್‌ ಇಂಡಿಯಾ ಮೂರು ಐಸಿಸಿ ವಿಶ್ವಕಪ್‌ಗಳನ್ನು ಗೆಲ್ಲುವುದಕ್ಕೆ ಕಾರಣರಾದ ಮಹೇಂದ್ರ ಸಿಂಗ್ ಧೋನಿ ಅವರು ಒಬ್ಬ ಪ್ರಬುದ್ಧ ವ್ಯಕ್ತಿಯಾಗಿದ್ದಾರೆ. ಅವರನ್ನು ‘ಟೀಮ್ ಮೆಂಟರ್’ ಆಗಿ ನೇಮಕ ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ’ ಎಂದು ಗಂಗೂಲಿ ಅಭಿಪ್ರಾಯಪಟ್ಟರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು