ಮೆಕ್ಸಿಕೊ ಸಿಟಿ: ಪಶ್ಚಿಮ ಮೆಕ್ಸಿಕೊದ ನಯರಿತ್ ಕಣಿವೆಗೆ ಬಸ್ ಉರುಳಿ ಭಾರತೀಯರು ಸೇರಿದಂತೆ 17 ಮಂದಿ ಸಾವನಪ್ಪಿದ್ದು 23 ಮಂದಿ ಗಾಯಗೊಂಡಿದ್ದಾರೆ. ಎಲೈಟ್ ಪ್ಯಾಸೆಂಜರ್ ಲೈನ್ನ ಬಸ್ನಲ್ಲಿ ಆರು ಭಾರತೀಯ ನಾಗರಿಕರು ಇದ್ದರು ಎಂದು ಡೈಲಿ ಮೇಲ್ ವರದಿ ಮಾಡಿದೆ.
ಮೆಕ್ಸಿಕೊದಿಂದ ಬಸ್ ಟಿಜುವಾನಕ್ಕೆ ಬಸ್ ಸಾಗುತ್ತಿತ್ತು. ದುರಂತದಲ್ಲಿ ಭಾರತೀಯ ಮೂಲದ ರಾಜನ್ ಸಿಂಗ್ ( 21), ಮಂದೀಪ್ ಕುಮಾರ್ ( 22) ಆಡಮಾ ಕೇನ್, (46) ಮತ್ತು ಹ್ಯಾನಿಡೌ ಕೇನ್ ಮೃತಪಟ್ಟಿದ್ದಾರೆ ಎಂಬುದು ತಿಳಿದುಬಂದಿದೆ. ಚಾಲಕ ನಿದ್ರೆ ಮಂಪರಿನಲ್ಲಿರುವುದು ಅಪಾತಕ್ಕೆ ಕಾರಣ ಎಂಬುದು ದೃಢಪಟ್ಟಿದೆ.
ನಯರಿತ್ ರಾಜ್ಯದ ಭದ್ರತೆ ಮತ್ತು ನಾಗರಿಕ ಸಂರಕ್ಷಣಾ ಕಾರ್ಯದರ್ಶಿ ಜಾರ್ಜ್ ರೋಡ್ರಿಗಸ್ ವರದಿಗಾರರೊಂದಿಗೆ ಮಾತನಾಡಿ, ಕಂದರ ಆಳವಾಗಿದ್ದು ರಕ್ಷಣಾ ಕಾರ್ಯಾಚರಣೆಯು “ಅತ್ಯಂತ ಕಷ್ಟಕರವಾಗಿದೆ ಎಂದು ತಿಳಿಸಿದ್ದಾರೆ. ಕಳೆದ ತಿಂಗಳು, ದಕ್ಷಿಣ ರಾಜ್ಯವಾದ ಓಕ್ಸಾಕಾದಲ್ಲಿಸಂಭವಿಸಿದ ಬಸ್ ಅಪಘಾತದಲ್ಲಿ 29 ಜನರು ಸಾವನ್ನಪ್ಪಿದರು.