ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಆತಂಕ ಹೊರಹಾಕಿರುವ ಸಿಂಗಪುರ ಸರ್ಕಾರ ಮಹತ್ವದ ಕ್ರಮವೊಂದಕ್ಕೆ ಮುಂದಾಗಿದೆ
ಕೋವಿಡ್ ಲಸಿಕೆ ಪಡೆಯಲು ಅರ್ಹವಾಗಿದ್ದರೂ ಸಹ, ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ಸರ್ಕಾರಿ ಅಧಿಕಾರಿಗಳಿಗೆ ವೇತನ ರಹಿತ ರಜೆ ನೀಡುವುದಾಗಿ ಎಚ್ಚರಿಕೆ ನೀಡಿದೆ.
‘ಲಸಿಕೆ ಪಡೆಯಲು ವೈದ್ಯಕೀಯವಾಗಿ ಅರ್ಹರಾಗಿದ್ದು, ಲಸಿಕೆ ಪಡೆಯಲು ಒಪ್ಪದಿದ್ದರೆ, ಅಂಥವರಿಗೆ ವೇತನ ರಹಿತ ರಜೆ ಅಥವಾ ಗುತ್ತಿಗೆ ಆಧಾರದ ನೌಕರರಿಗೆ ಗುತ್ತಿಗೆ ನವೀಕರಣವಿಲ್ಲದೇ ಒಪ್ಪಂದ ರದ್ದುಗೊಳಿಸಲಾಗುವುದು’ ಎಂದು ಸಚಿವಾಲಯದ ಈ ಪ್ರಕಟಣೆಯಲ್ಲಿ ತಿಳಿಸಿದೆ.
ನಿನ್ನೆ ದೇಶಾದ್ಯಂತ 3,653 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಸೋಂಕಿಗೆ 12 ಮಂದಿ ಬಲಿಯಾಗಿದ್ದಾರೆ.