ನವದೆಹಲಿ: ಮುಂಬಯಿಯಲ್ಲಿ 2008ರಲ್ಲಿ ನಡೆದ ಸರಣಿ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದಿಂದ ಕಾರ್ಯಾಚರಿಸುತ್ತಿರುವ ಉಗ್ರ ಸಂಘಟನೆಗಳು ಭಾಗಿಯಾಗಿವೆ ಎಂದು ಪಾಕಿಸ್ತಾನದ ಉಚ್ಛಾಟಿತ ಪ್ರಧಾನ ಮಂತ್ರಿ ನವಾಜ್ ಷರೀಫ್ ದೊಡ್ಡ ರಹಸ್ಯವೊಂದನ್ನು ಹೊರಹಾಕಿದ್ದಾರೆ.
ಡಾನ್ ಪತ್ರಿಕೆಗೆ ನೀಡಿದೆ ಸಂದರ್ಶನದಲ್ಲಿ ಮಾತನಾಡಿದ ಪಾಕಿಸ್ತಾನದ ಮಾಜಿ ಪ್ರಧಾನಿ ಶರೀಪ್, ಉಗ್ರ ಸಂಘಟನೆಗಳು ಸಕ್ರಿಯವಾಗಿದೆ. ಇವರು ಗಡಿಯಿಂದ ಆಚೆಗೆ ಹೋಗಿ ಮುಂಬಯಿಯಲ್ಲಿ 150 ಮಂದಿಯನ್ನು ಕೊಲ್ಲಲು ಅವಕಾಶ ನೀಡಬೇಕೇ? ವಿಚಾರಣೆ ನಾವು ಯಾಕೆ ಪೂರ್ಣಗೊಳಿಸಬಾರದು ಎಂದು ಅವರು ಪ್ರಶ್ನಿಸಿದರು.
2008ರ ನವಂಬರ್ 26ರಂದು 10 ಮಂದಿ ಶಸ್ತ್ರಾಸ್ತಧಾರಿ ಉಗ್ರರು ಮುಂಬಯಿ ಮೇಲೆ ದಾಳಿ ಮಾಡಿದ್ದರು. ಈ ದಾಳಿಯಲ್ಲಿ ಸುಮಾರು 166 ಮಂದಿ ಮೃತಪಟ್ಟಿದ್ದರು. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಒಬೆರಾಯ್ ಟ್ರಿಡೆಂಟ್, ತಾಜ್ ಹೋಟೆಲ್ ಮತ್ತು ಲೆಯೊಪೊಲ್ಡ್ ಕೆಫೆಯ ಮೇಲೆ ದಾಳಿ ಮಾಡಲಾಗಿತ್ತು.