News Karnataka Kannada
Sunday, May 05 2024
ವಿದೇಶ

ಮಹಾತ್ಮ ಗಾಂಧಿಯವರ ಆದರ್ಶದ ಸ್ಮರಣಾರ್ಥ £5 ನಾಣ್ಯ ಅನಾವರಣಗೊಳಿಸಿದ ಯುಕೆ

Gandhiji
Photo Credit :

ದೀಪಾವಳಿಯ ಈ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರ ಜೀವನ ಮತ್ತು ಪರಂಪರೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಹೊಸ  £5 ನಾಣ್ಯವನ್ನು ಇಂಗ್ಲೆಂಡ್’ನ ಚಾನ್ಸೆಲರ್ ರಿಷಿ ಸುನಕ್ ಯುಕೆಯಲ್ಲಿ ಅನಾವರಣಗೊಳಿಸಿದ್ದಾರೆ.

ಈ ನಾಣ್ಯವು ರಾಯಲ್ ಮಿಂಟ್‌ನ ದೀಪಾವಳಿಯ ಸಂಗ್ರಹದ ಭಾಗವಾಗಿದೆ. ಇದನ್ನು ಹೀನಾ ಗ್ಲೋವರ್ ವಿನ್ಯಾಸಗೊಳಿಸಿದ್ದಾರೆ, ಇದು ಗಾಂಧಿಯವರ ಅತ್ಯಂತ ಪ್ರಸಿದ್ಧ ಉಲ್ಲೇಖಗಳಲ್ಲಿ ಒಂದಾದ “ನನ್ನ ಜೀವನವೇ ನನ್ನ ಸಂದೇಶ ‘ಮೈ ಲೈಫ್ ಈಸ್ ಮೈ ಮೆಸೇಜ್’ ಜೊತೆಗೆ ಭಾರತದ ರಾಷ್ಟ್ರೀಯ ಹೂವು ಕಮಲದ ಚಿತ್ರವನ್ನು ಒಳಗೊಂಡಿದೆ.

ಇದೇ ಮೊದಲ ಬಾರಿಗೆ ಗಾಂಧಿಯವರನ್ನು ಅಧಿಕೃತವಾಗಿ ಯುಕೆಯಲ್ಲಿ ನಾಣ್ಯದ ಮೂಲಕ ಸ್ಮರಿಸಲಾಗಿದೆ. ಇದು ಯುಕೆ ಮತ್ತು ಭಾರತದ ನಡುವಿನ ಬಲವಾದ ಸಂಬಂಧಗಳು ಮತ್ತು ಸಾಂಸ್ಕೃತಿಕ ಸಂಪರ್ಕಗಳನ್ನು ಬಿಂಬಿಸುತ್ತದೆ.

“ಈ ನಾಣ್ಯವು ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಪ್ರೇರೇಪಿಸಿದ ಪ್ರಭಾವಿ ನಾಯಕನಿಗೆ ಸೂಕ್ತವಾದ ಗೌರವವಾಗಿದೆ… ದೀಪಾವಳಿಯ ಸಮಯದಲ್ಲಿ ಈ ನಾಣ್ಯವನ್ನು ಅನಾವರಣಗೊಳಿಸಲು ನಾನು ಹೆಮ್ಮೆಪಡುತ್ತೇನೆ. ಮಹಾತ್ಮ ಗಾಂಧಿಯವರು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಮುಖರು. ಮೊದಲ ಬಾರಿಗೆ ಅವರ ಗಮನಾರ್ಹ ಜೀವನದ ಸ್ಮರಣಾರ್ಥವಾಗಿ ಯುಕೆ ನಾಣ್ಯವನ್ನು ಬಿಡುಗಡೆ ಮಾಡಿರುವುದು ಅದ್ಭುತಗಳಲ್ಲೊಂದು” ಎಂದು ಚಾನ್ಸೆಲರ್ ರಿಷಿ ಸುನಕ್ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು