ನವದೆಹಲಿ: ಖಲಿಸ್ತಾನಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ವಿಷಯವಾಗಿ ಕೆನಡಾದಲ್ಲಿ ಏನೆಲ್ಲ ನಡೆಯುತ್ತಿದ್ದರೂ ಅಲ್ಲಿನ ಆಂತರಿಕ ರಾಜಕೀಯವೇ ಕಾರಣವಾಗಿದ್ದು, ಅದಕ್ಕೂ ಭಾರತಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಹಿರಿಯ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ವಿದೇಶಾಂಗ ಸಚಿವರು, ‘ಅಭಿವೃದ್ಧಿ ಹೊಂದಿದ ಭಾರತ’ವನ್ನು ಮಾಡಲು ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಂತಹ ಬಲಿಷ್ಠ ಮತ್ತು ಕ್ರಿಯಾಶೀಲ ನಾಯಕ ದೇಶಕ್ಕೆ ಅಗತ್ಯವಿದೆ ಎಂದು ಹೇಳಿದರು.
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಭಾರತವನ್ನು ಏಕೆ ಟೀಕಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಜೈಶಂಕರ್ ಪ್ರತಿಕ್ರಿಯಿಸಿದ ಸಚಿವರು, ಜಾಗತಿಕ ಮಟ್ಟದಲ್ಲಿ ಭಾರತದ ಚಿತ್ರಣವು ಮೊದಲಿಗಿಂತ ಈಗ ಉತ್ತಮವಾಗಿದೆ ಕೆನಡಾ ಒಂದು ಅಪವಾದವಾಗಿದೆ. ವಿವಿಧ ದೇಶಗಳ ನಾಯಕರು ಭಾರತ ಮತ್ತು ಅದರ ಪ್ರಧಾನಿಯನ್ನು ಹೊಗಳುವುದನ್ನು ನೀವು ನೋಡಿದ್ದೀರಿ. ಕೆನಡಾದ ಆಡಳಿತ ಪಕ್ಷಕ್ಕೆ ಸಂಸತ್ತಿನಲ್ಲಿ ಬಹುಮತವಿಲ್ಲ ಮತ್ತು ಕೆಲವು ಪಕ್ಷಗಳು ಖಲಿಸ್ತಾನ್ ಪರ ನಾಯಕರ ಮೇಲೆ ಅವಲಂಬಿತವಾಗಿವೆ ಎಂದು ವಿದೇಶಾಂಗ ಸಚಿವರು ಹೇಳಿದರು.
ಕೆನಡಾ ಸರ್ಕಾರವು ಏನನ್ನೂ ಮಾಡಲಿಲ್ಲ – ಜೈಶಂಕರ್ ನಮಗೆ ಮತ್ತು ನಮ್ಮ ಸಂಬಂಧಗಳಿಗೆ ಸಮಸ್ಯೆ ಉಂಟುಮಾಡುವವರಿಗೆ ವೀಸಾ, ಮಾನ್ಯತೆ ಅಥವಾ ರಾಜಕೀಯ ಕ್ಷೇತ್ರದಲ್ಲಿ ಸ್ಥಾನ ನೀಡಬೇಡಿ ಎಂದು ನಾವು ಅವರಿಗೆ ಹಲವು ಬಾರಿ ಹೇಳಿದ್ದೇವೆ.
ಕೆನಡಾ ಸರ್ಕಾರವು ಏನನ್ನೂ ಮಾಡಲಿಲ್ಲ, 25 ಜನರನ್ನು ಹಸ್ತಾಂತರಿಸುವಂತೆ ಭಾರತ ಒತ್ತಾಯಿಸಿದೆ, ಅವರಲ್ಲಿ ಹೆಚ್ಚಿನವರು ಖಲಿಸ್ತಾನ್ ಬೆಂಬಲಿಗರು, ಆದರೆ ಅವರು ಯಾವುದೇ ಗಮನ ಹರಿಸಲಿಲ್ಲ ಎಂದರು.