ನವದೆಹಲಿ : ಬದಲಾಗಿ ಮಧ್ಯಪಾನದಿಂದ ಮೃತಪಟ್ಟರೆ ಪರಿಹಾರ ನೀಡಬೇಕಾಗಿಲ್ಲ ಮದ್ಯಪಾನದಿಂದ ಸಾವನ್ನಪ್ಪಿದ್ದರೆ ಪರಿಹಾರ ಇಲ್ಲ ಎಂಬ ಅಂಶ ಕಾನೂನಿನಲ್ಲಿ ಕೂಡ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ .
ಹಿಮಾಚಲ ಪ್ರದೇಶದ ಅರಣ್ಯ ನಿಗಮದ ಸಿಬ್ಬಂದಿಯೊಬ್ಬರು ಮಧ್ಯಪಾನದಿಂದ ಮೃತಪಟ್ಟಿದ್ದರು . ಈ ಸಂಬಂಧ ಪರಿಹಾರ ನೀಡಲು ವಿಮಾ ಸಂಸ್ಥೆ ನಿರಾಕರಿಸಿತ್ತು . ವಿಚಾರಣೆ ನಡೆಸಿದ ರಾಷ್ಟ್ರೀಯ ಗ್ರಾಹಕ ವಿವಾದಗಳ ಪರಿಹಾರ ಆಯೋಗ ಕೂಡ ಇದೇ ನಿಲುವು ಎತ್ತಿ ಹಿಡಿದಿತ್ತು . ಇದನ್ನು ಪ್ರಶ್ನಿಸಿ ಅವರ ಪತ್ನಿ ನರ್ಮದಾ ದೇವಿ ಸುಪ್ರೀಂ ಕೋರ್ಟ್’ನಲ್ಲಿ ಪ್ರಶ್ನಿಸಿದ್ದರು .
ಈ ಬಗ್ಗೆ ತೀರ್ಪು ನೀಡಿರುವ ನ್ಯಾಯಮೂರ್ತಿಗಳಾದ ಎಂ ಎಂ ಶಾಂತನಗೌಡರ್ ಮತ್ತು ವಿನೀತ್ ಶರಣ್ ಅವರನ್ನೊಳಗೊಂಡ ಪೀಠ ಅಪಘಾತದಿಂದ ಗಾಯಗೊಂಡು ಮೃತಪಟ್ಟರೆ ಮಾತ್ರ ವಿಮಾ ಪರಿಹಾರಕ್ಕೆ ಅರ್ಹರಾಗುತ್ತಾರೆ. ಆದರೆ ಮಧ್ಯ ಸೇವಿಸಿ ಸಾವನ್ನಪ್ಪಿದ್ದಾರೆ ಅವರಿಗೆ ಪರಿಹಾರ ಸಿಗುವುದಿಲ್ಲ ಎಂದು ಗ್ರಾಹಕ ವಿವಾದಗಳ ಪರಿಹಾರ ಆಯೋಗದ ತೀರ್ಪನ್ನು ಎತ್ತಿ ಹಿಡಿದಿದೆ.