ನವದೆಹಲಿ: ಶನಿವಾರ ದೆಹಲಿ ಪೊಲೀಸರು ನಡೆಸಿದ ಎನ್ ಕೌಂಟರ್ ನಲ್ಲಿ ನಾಲ್ಕು ಮಂದಿ ರೌಡಿಗಳು ಬಲಿಯಾಗಿದ್ದಾರೆ.
ದೆಹಲಿ ದಕ್ಷಿಣ ಭಾಗದ ಫತೇಹ್ ಪುರ್ ಬೆರಿಯ ಗ್ರಾಮದಲ್ಲಿ ಪೊಲೀಸರು ಎನ್ ಕೌಂಟರ್ ನಡೆಸಿದ್ದು, ಕಾರಿನಲ್ಲಿ ತೆರಳುತ್ತಿದ್ದ ರಾಜೇಶ್ ಭಾರ್ತಿ ಮತ್ತು ಆತನ ಮೂವರು ಸಹಚರರನ್ನು ಎನ್ ಕೌಂಟರ್ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಕಾರನ್ನು ಅಡ್ಡಗಟ್ಟಿದ ಪೊಲೀಸರು ಶರಣಾಗುವಂತೆ ಸೂಚಿಸಿದರೂ ಕಾರಿನಲ್ಲಿದ್ದವರು ಗುಂಡಿನ ದಾಳಿ ನಡೆಸಿದ್ದಾರೆ. ನಾಲ್ಕು ಮಂದಿ ಪೊಲೀಸರು ಕೂಡ ಗಾಯಗೊಂಡಿದ್ದಾರೆ.
ಗಾಯಾಳು ಪೊಲೀಸರು ಮತ್ತು ಗ್ಯಾಂಗ್ ನ ಒಬ್ಬ ಸದಸ್ಯನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹರ್ಯಾಣ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಮೋಸ್ಟ್ ವಾಟೆಂಡ್ ಕ್ರಿಮಿನಲ್ ರಾಜೇಶ್ ಬಾರ್ತಿ ಬಂಧನಕ್ಕೆ ಒಂದು ಲಕ್ಷ ರೂ. ಬಹುಮಾನವಿತ್ತು.