News Karnataka Kannada
Saturday, April 27 2024
ವಿದೇಶ

ತಾಲಿಬಾನಿಗಳಿಗೆ ಹಿನ್ನಡೆ ಉಂಟು ಮಾಡಿರುವ ಪಂಜ್‌ ಶೀರ್‌ ಪ್ರಾಂತ್ಯ

Taliban
Photo Credit :

ಕಾಬೂಲ್, ; ರಾಜಧಾನಿ ಕಾಬೂಲ್ ಸೇರಿದಂತೆ ಆಫ್ಘಾನಿಸ್ತಾನದ ಬಹುತೇಕ ಭಾಗವನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವ ತಾಲಿಬಾನಿಗಳು, ತಮಗೆ ಸಡ್ಡು ಹೊಡೆದಿರುವ ಪಂಜ್‍ಶೀರ್ ಪ್ರದೇಶವನ್ನು ವಶಕ್ಕೆ ಪಡೆದುಕೊಳ್ಳಲು ಯುದ್ಧ ಸಾರಿದ್ಧಾರೆ. ಈ ನಡುವೆ ಕಾಬೂಲ್‍ನ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪರಿಚಿತರು ನಡೆಸಿದ ಗುಂಡಿನ ದಾಳಿಯಿಂದ ಆಫ್ಘನ್ ಸೇನೆಯ ಒರ್ವ ಮೃತಪಟ್ಟಿದ್ಧಾರೆ.
ಕಾಬೂಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊರ ದೇಶಗಳಿಗೆ ತೆರಳಲು ಸಾವಿರಾರು ಮಂದಿ ಸೇರಿದ್ದಾರೆ. ಅಲ್ಲಿಗೆ ಅಪರಿಚಿತರು ನುಗ್ಗಿದ್ದು ಗುಂಡಿನ ದಾಳಿ ನಡೆಸಿದ್ದಾರೆ. ಪ್ರತಿಯಾಗಿ ಆಫ್ಘನಿಸ್ತಾನದ ರಕ್ಷಣಾ ಪಡೆಗಳು ಪ್ರತಿ ದಾಳಿ ನಡೆಸಿವೆ. ಈ ಚಕಮಕಿಯಲ್ಲಿ ಆಫ್ಘಾನಿಸ್ತಾನದ ರಕ್ಷಣಾ ಪಡೆಯ ಒಬ್ಬರು ಮೃತ ಪಟ್ಟು, ಮೂವರು ಗಾಯಗೊಂಡಿದ್ದಾರೆ ಎಂದು ಜರ್ಮಿನಿಯ ಸೇನಾಪಡೆ ಹೇಳಿದೆ. ಆಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್‍ಘನಿ ದೇಶ ಬಿಟ್ಟು ಪರಾರಿಯಾದ ಬಳಿಕ ಕಾಬೂಲ್ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ತಾಲಿಬಾನಿಗಳು ತಮ್ಮ ಹಿಡಿತ ಸಾಧಿಸಿದ್ದಾರೆ. ಆದರೆ ಕೆಲವು ರಾಜ್ಯಗಳಲ್ಲಿ ತಾಳಿಬಾನಿಗಳಿಗೆ ಪ್ರತಿರೋಧ ವ್ಯಕ್ತವಾಗಿವೆ. ಮೂರು ಜಿಲ್ಲೆಗಳು ಸಂಪೂರ್ಣ ತಾಲಿಬಾನಿಗಳಿಂದ ಮುಕ್ತವಾಗಿದೆ ಎಂದು ಕಳೆದ ಎರಡು ದಿನಗಳ ಹಿಂದಷ್ಟೇ ಸ್ಥಳೀಯರು ಘೋಷಿಸಿದ್ದರು.
ಉತ್ತರ ವಲಯದ ಜನರು ತಾಲಿಬಾನಿಗಳ ವಿರುದ್ಧ ಸೆಟೆದು ನಿಂತಿದ್ದು, ಪಂಜಶೀರ್ ಕಣಿವೆಯ ಮೂರು ಜಿಲ್ಲೆಗಳನ್ನು ಬಂಡುಕೋರರಿಂದ ಬಿಡಿಸಿಕೊಂಡಿದ್ದೇವೆ. ಮಾಜಿ ರಾಜ್ಯಪಾಲರ ನೇತೃತ್ವದಲ್ಲಿ ಆಫ್ಘಾನಿಸ್ತಾನದ ರಕ್ಷಣಾ ಪಡೆಗಳು ಒಗ್ಗೂಡಿವೆ ಎಂದು ಹೇಳಲಾಗಿತ್ತು. ಆಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಉಸ್ತುವಾರಿ ಅಧ್ಯಕ್ಷರೆಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದು, ಪಂಜ್‍ಶೀರ್ ಭಾಗವನ್ನು ವಶ ಪಡಿಸಿಕೊಳ್ಳಲು ಅಪಾರ ಪ್ರಮಾಣದ ತಾಲಿಬಾನ್ ಪಡೆಗಳು ಆ ಪ್ರದೇಶವನ್ನು ಸುತ್ತುವರೆದಿದೆ. ತಾಲಿಬಾನಿಗಳ ವಿರುದ್ಧದ ಶಕ್ತಿಗಳನ್ನು ಮುಲ್ಲಾಜಿಲ್ಲದೆ ಮಟ್ಟ ಹಾಕಲಾಗುವುದು ಎಂದು ಘೋಷಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು