ಕಾಬೂಲ್ ; ಅಫ್ಘಾನಿಸ್ತಾನದಲ್ಲಿ ಹೆಚ್ಚುತ್ತಿರುವ ತಾಲಿಬಾನ್ ಉಗ್ರರ ಧಾಳಿಗಳಿಗೆ ಆತಂಕಗೊಂಡಿರುವ ಭಾರತ ಸರ್ಕಾರ ತನ್ನ ಪ್ರಜೆಗಳನ್ನು ಭಾರತಕ್ಕೆ ಕರೆಸಿಕೊಳ್ಳಲು ಸೂಚನೆ ನೀಡಿದೆ. ನವದೆಹಲಿಗೆ ಬರಲು “ವಿಶೇಷ ವಿಮಾನ”ಗಳನ್ನು ನಿಯೋಜಿಸಲಾಗಿದ್ದು ಅದರಲ್ಲಿ ತವರಿಗೆ ಹೊರಡುವಂತೆ ಭಾರತವು ತನ್ನ ಪ್ರಜೆಗಳಳಿಗೆ ಸೂಚಿಸಿದೆ.
ತಾಲಿಬಾನ್ಗಳು ಈ ಪ್ರದೇಶವನ್ನು ಅಂದರೆ ಅತಿದೊಡ್ಡ ನಗರವಾದ ಮಜರ್-ಐ-ಷರೀಫ್ಅನ್ನು ವಿವಿಧ ದಿಕ್ಕುಗಳಿಂದ ಸುತ್ತುವರೆಯುವ ಹಂತದಲ್ಲಿರುವಾಗ ಈ ಬೆಳವಣಿಗೆ ನಡೆದಿದೆ.
“ಮಜರ್-ಇ-ಶರೀಫ್ನಿಂದ ನವ ದೆಹಲಿಗೆ ವಿಶೇಷ ವಿಮಾನ ಹೊರಡುತ್ತಿದೆ. ಮಜರ್-ಇ-ಶರೀಫ್ ಮತ್ತು ಸುತ್ತಮುತ್ತಲು ಇರುವ ಯಾವುದೇ ಭಾರತೀಯ ಪ್ರಜೆಗಳು ಮಂಗಳವಾರ ಸಂಜೆ ತಡವಾಗಿ ಹೊರಡಲಿರುವ ವಿಶೇಷ ವಿಮಾನದಲ್ಲಿ ಭಾರತಕ್ಕೆ ತೆರಳಲು ವಿನಂತಿಸಲಾಗಿದೆ: ಭಾರತೀಯ ದೂತಾವಾಸ ಜನರಲ್ -ಇ-ಶರೀಫ್ ಅಫ್ಘಾನಿಸ್ತಾನ, ಮತ್ತು “ಅಫ್ಘಾನಿಸ್ತಾನದ ಮಜಾರ್ ನಗರದಲ್ಲಿ ಇರುವ ಭಾರತೀಯ ದೂತಾವಾಸವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
“ವಿಶೇಷ ವಿಮಾನದಲ್ಲಿ ಹೊರಡಲು ಇಚ್ಛಿಸುವ ಭಾರತೀಯ ನಾಗರಿಕರು ತಮ್ಮ ಪೂರ್ಣ ಹೆಸರು, ಪಾಸ್ಪೋರ್ಟ್ ಸಂಖ್ಯೆ, ಮುಕ್ತಾಯ ದಿನಾಂಕವನ್ನು ಈ ಕೆಳಗಿನ ಸಂಖ್ಯೆಗಳಿಗೆ 0785891303, 0785891301 ಗೆ ತಕ್ಷಣ ತಿಳಿಸಬೇಕು” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಳೆದ ತಿಂಗಳು, ಭಾರತವು ಸುಮಾರು 50 ಭಾರತೀಯ ರಾಜತಾಂತ್ರಿಕರು ಮತ್ತು ಭದ್ರತಾ ಅಧಿಕಾರಿಗಳನ್ನು ಕಂದಹಾರ್ನಲ್ಲಿರುವ ತನ್ನ ದೂತಾವಾಸದಿಂದ ವಾಪಸ್ ಕಡೆಸಿಕೊಂಡಿತ್ತು. ಅಫ್ಘಾನಿಸ್ತಾನದಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲಿಬಾನ್ ಹೊಸ ಪ್ರದೇಶಗಳ ಮೇಲೆ ಹಿಡಿತ ಸಾಧಿಸುತ್ತಿರುವ ಈ ಹೊತ್ತಿನಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡಿತ್ತು.ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿ ಸೇರಿದಂತೆ ಭಾರತೀಯ ರಾಜತಾಂತ್ರಿಕರು, ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಗಳನ್ನು ಮರಳಿ ಕರೆತರಲು ಭಾರತೀಯ ವಾಯುಪಡೆಯ ವಿಶೇಷ ವಿಮಾನವನ್ನು ಕಳುಹಿಸಲಾಗಿತ್ತು.
ಸರ್ಕಾರದ ಮಾಹಿತಿಯ ಪ್ರಕಾರ, ಸುಮಾರು 1,500 ಭಾರತೀಯರು ಪ್ರಸ್ತುತ ಅಫ್ಘಾನಿಸ್ತಾನದಲ್ಲಿ ನೆಲೆಸಿದ್ದಾರೆ.ಕಳೆದ ವಾರ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಲೋಕಸಭೆಯಲ್ಲಿ ಭಾರತವು ಜಾಗರೂಕವಾಗಿದೆ ಮತ್ತು ಸಂಘರ್ಷದಿಂದ ಕೂಡಿದ ದೇಶದಲ್ಲಿ ಇರುವ ಭಾರತೀಯರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿತ್ತು.
ಅಫ್ಘಾನಿಸ್ಥಾನದಿಂದ ಭಾರತೀಯರು ತವರಿಗೆ ಮರಳಲು ಸೂಚನೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.