News Karnataka Kannada
Thursday, May 02 2024
ಮೈಸೂರು

ದಶಪಥ ರಸ್ತೆ ನನ್ನದು ನಿನ್ನದು ಎಂದು ಕಿತ್ತಾಡುವ ವಿಷಯವಲ್ಲ ಶಾಸಕ ರಾಮದಾಸ್‌

S A Ramadas
Photo Credit :

ಮೈಸೂರು: ಮೈಸೂರು- ಬೆಂಗಳೂರು ದಶಪಥ ರಸ್ತೆ ಅಭಿವೃದ್ಧಿಯೇ ಮುಖ್ಯವೇ ಹೊರತು ಅದು ನಾನು ಮಾಡಿಸಿದ್ದು ಎಂದು ಚೌಕಾಶಿ ಮಾಡುವ ವಿಚಾರವಲ್ಲ. ಆ ರಸ್ತೆ ದೇಶಕ್ಕೆ ಸೇರಿದ್ದು, ಎಲ್ಲರೂ ಸೇರಿ ಅಭಿವೃದ್ಧಿ ಮಾಡಬೇಕು. ನಾನೇ ಮಾಡಿಸಿದ್ದು ಎನ್ನುವುದು ತಪ್ಪು ಎಂದು ಹಾಲಿ ಶಾಸಕ ಎಸ್.ಎ.ರಾಮದಾಸ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಯೋಜನೆ ಭಾರತ ದೇಶದದ್ದು, ಭಾರತಾಂಬೆಗೆ ಸೇರಿದ್ದು. ನಗರಪಾಲಿಕೆ, ರಾಜ್ಯ ಸರ್ಕಾರ ಚರ್ಚೆ ಮಾಡುವುದಲ್ಲ. ನಮ್ಮ ಕ್ಷೇತ್ರದಲ್ಲಿ 420 ಕಿ.ಮೀ. ರಸ್ತೆಯನ್ನು ಒಂದು ವರ್ಷದೊಳಗೆ ಸುಸಜ್ಜಿತ ರಸ್ತೆಯನ್ನಾಗಿ ಮಾಡುತ್ತೇನೆ. ಹಾಗಂತ ನಾನು ಕ್ಲೇಮ್ ಮಾಡಲು ಬರುತ್ತದಾ? ಬೇರೆ ಬೇರೆ ಇಲಾಖೆಗಳ ಮಧ್ಯಸ್ಥಿಕೆ ಇರುವುದರಿಂದ ಅದು ನನ್ನೊಬ್ಬನದೆ ಎನ್ನುವಂತಹದ್ದು. ನಮ್ಮದಲ್ಲ, ನಿಮ್ಮದಲ್ಲ ಅಂತ ಜೂಜಾಡುವಂಹತದ್ದಲ್ಲ. ಅಂತಹ ಕೆಲಸ ಯಾರೇ ಮಾಡಿದ್ದರೂ ಅದು ತಪ್ಪು ಎಂದು ಸಂಸದ ಪ್ರತಾಪ್ ಸಿಂಹ, ಮಾಜಿ ಸಂಸದ ಎ.ಎಚ್.ವಿಶ್ವನಾಥ್ ಅವರಿಗೆ ತಿರುಗೇಟು ನೀಡಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು