ಕಾಠ್ಮಂಡು: ಭಾರತ-ನೇಪಾಳ ವಿದೇಶಾಂಗ ಮಂತ್ರಿಗಳ ನಡುವಿನ ನಿರ್ಣಾಯಕ ದ್ವಿಪಕ್ಷೀಯ ಮಾತುಕತೆಗೆ ಕೆಲವು ದಿನಗಳ ಮುಂಚೆಯೇ ಗಡಿ ವಿವಾದದ ದೀರ್ಘಕಾಲೀನ ಪರಿಹಾರವನ್ನು ಕೇಂದ್ರೀಕರಿಸುವ ಸಾಧ್ಯತೆಯಿದೆ ಎಂದು ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.
“ಮಹಾಕಾಳಿ ನದಿಯ ಪೂರ್ವಕ್ಕೆ ಇರುವ ಕಲಾಪನಿ, ಲಿಂಪಿಯಾಧುರಾ ಮತ್ತು ಲಿಂಪುಲೆಖ್ ಸುಗಾಲಿ ಒಪ್ಪಂದದ ಪ್ರಕಾರ ನೇಪಾಳಕ್ಕೆ ಸೇರಿದವು. ಆದರೆ ಅವು ಭಾರತದಲ್ಲಿದೆ ನಾವು ಭಾರತದೊಂದಿಗೆ ರಾಜತಾಂತ್ರಿಕ ಮಾತುಕತೆ ಮೂಲಕ ಮರಳಿ ಪಡೆಯುತ್ತೇವೆ” ಎಂದು ನೇಪಾಳ ಪ್ರಧಾನಿ ಕೆ.ಪಿ.ಲಿ ಭಾನುವಾರದ ಭಾಷಣದಲ್ಲಿ ಹೇಳಿದ್ದಾರೆ.
ಹೊಸ ರಾಜಕೀಯ ನಕ್ಷೆಯೊಂದಿಗೆ ನೇಪಾಳದ ಭಾಗವಾಗಿ ಭಾರತೀಯ ಪ್ರದೇಶಗಳನ್ನು ತೋರಿಸುವ ಪ್ರಕರಣ ಕಳೆದ ವರ್ಷ ನಡೆದಿತ್ತು. “ನಮ್ಮ ವಿದೇಶಾಂಗ ಸಚಿವರು ಜನವರಿ 14 ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದಿದೆ.