News Karnataka Kannada
Sunday, April 28 2024
ವಿದೇಶ

ಕುಡಿದ ಅಮಲಿನಲ್ಲಿ ರೆಸ್ಟೋರೆಂಟ್ ಕಟ್ಟಡದಿಂದ ಜಿಗಿದು ಮಾಜಿ ಸಚಿವನ ಪುತ್ರ ಸಾವು

Photo Credit :

ಕುಡಿದ ಅಮಲಿನಲ್ಲಿ ರೆಸ್ಟೋರೆಂಟ್ ಕಟ್ಟಡದಿಂದ ಜಿಗಿದು ಮಾಜಿ ಸಚಿವನ ಪುತ್ರ ಸಾವು

ನವದೆಹಲಿ: ದೆಹಲಿಯಲ್ಲಿ ಮಣಿಪುರದ ಮಾಜಿ ಸಚಿವ ಎಂ. ಒಕೆಂದ್ರು ಅವರ ಮಗ ಹೌಜ್ ಖಾಸ್ ರೆಸ್ಟೋರೆಂಟ್ ಕಟ್ಟಡದಿಂದ ಬಿದ್ದು ನಿಗೂಢವಾಗಿ ಸಾವನ್ನಪ್ಪಿದ್ದಾನೆ. ಎಂ.ಒಕೆಂದ್ರು ಅವರ ಪುತ್ರ19 ವರ್ಷದ ಸಿದ್ಧಾರ್ಥ್‌ ಮೃತ ಯುವಕ.  ಸಿದ್ಧಾರ್ಥ್‌ ವಿದ್ಯಾಭ್ಯಾಸಕ್ಕಾಗಿ ದೆಹಲಿಯಲ್ಲಿ ತನ್ನ ಸಹೋದರಿಯೊಂದಿಗೆ ನೆಲೆಸಿದ್ದ. ಭಾನುವಾರ ಸಂಜೆ 4:10ರ ಸುಮಾರಿಗೆ ರೆಸ್ಟೋರೆಂಟ್‌ವೊಂದರ 2ನೇ ಮಹಡಿಯಿಂದ ಬಿದ್ದು ಸಿದ್ಧಾರ್ಥ್‌ ಸಾವನ್ನಪ್ಪಿದ್ದಾನೆ. ಸಿದ್ಧಾರ್ಥ್‌ ಕುಡಿದ ಮತ್ತಿನಲ್ಲಿ ರೆಸ್ಟೋರೆಂಟ್‌‌ ಟೆರೇಸ್‌ ಏರಿ ಪಕ್ಕದ ಗೋಡೆಯನ್ನು ಹತ್ತಲು ಯತ್ನಿಸುತ್ತಿದ್ದ. ಆಗ ರೆಸ್ಟೋರೆಂಟ್‌‌ನ ವೇಟರ್‌ ಇದನ್ನು ಗಮನಿಸಿ ಗೋಡೆಯಿಂದ ಕೆಳಗಿಳುವಂತೆ ಸಿದ್ಧಾರ್ಥ್ ನಲ್ಲಿ ಕೇಳಿಕೊಂಡ ಎನ್ನಲಾಗಿದೆ.  ಆದರೆ, ಇದಾದ ಕೆಲ ಹೊತ್ತಿನಲ್ಲೇ ರೆಸ್ಟೋರೆಂಟ್‌ನ 2ನೇ ಮಹಡಿಯಿಂದ ಸಿದ್ಧಾರ್ಥ್‌ ಬಿದ್ದಿದ್ದಾನೆ. ಆಗ ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು ಸಿದ್ಧಾರ್ಥ್‌ ಬದುಕುಳಿದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಯುತ್ತಿದ್ದಾರೆ 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು