ಗಾಜಿಯಾಬಾದ್: ಉತ್ತರ ಪ್ರದೇಶದ ಮುರಾದ್ನಗರದ ಶವಸಂಸ್ಕಾರದ ಮೈದಾನದಲ್ಲಿ ಆಶ್ರಯದ ಮೇಲ್ಚಾವಣಿ ಭಾನುವಾರ ಕುಸಿದ ಪರಿಣಾಮ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ 25 ಮಂದಿ ಸಾವನಪ್ಪಿದ್ದು, 16 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಜೂನಿಯರ್ ಎಂಜಿನಿಯರ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಗಳನ್ನು ನಿಹಾರಿಕಾ ಸಿಂಗ್, ಚಂದ್ರಪಾಲ್ ಮತ್ತು ಮೇಲ್ವಿಚಾರಕ ಆಶಿಶ್ ಎಂದು ಗುರುತಿಸಲಾಗಿದೆ.
ಮಳೆ ಬರುವಾಗ ಹಲವಾರು ಜನರು ಇತ್ತೀಚೆಗೆ ನಿರ್ಮಿಸಿದ ಮೇಲ್ಛಾವಣಿಯಲ್ಲಿ ಆಶ್ರಯ ಪಡೆಯುತ್ತಿದ್ದರು. ಸಾವನಪ್ಪಿದವರೆಲ್ಲರು ಪುರುಷರೇ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಘಟನಾ ಸ್ಥಳಕ್ಕೆ ಮೊದಲು ಸ್ಥಳೀಯರು ಧಾವಿಸಿದ್ದು ನಂತರ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ಡಿಆರ್ಎಫ್) ಘಟಕವೂ ಸ್ಥಳಕ್ಕೆ ತಲುಪಿ, ಶವಗಳನ್ನು ಮತ್ತು ಗಾಯಾಳುಗಳನ್ನು ಅವಶೇಷಗಳಿಂದ ಹೊರತೆಗೆದಿದೆ. ಶವಗಳನ್ನು ಹೊರತೆಗೆಯಲು ಕ್ರೇನ್ ಅನ್ನು ಬಳಸಲಾಯಿತು.
ಈ ಆಶ್ರಯವನ್ನು ಕೇವಲ ಒಂದು ಅಥವಾ ಎರಡು ತಿಂಗಳ ಹಿಂದೆ ನಿರ್ಮಿಸಲಾಗಿದೆ. ವರ್ಷದ ಮೊದಲ ಮಳೆಗೆ ಮೇಲ್ಚಾವಣಿ ಕುಸಿದಿದೆ. ಗುತ್ತಿಗೆದಾರನನ್ನು ತಕ್ಷಣ ಬಂಧಿಸಬೇಕು ಎಂದು ಸಾವನಪ್ಪಿದವರ ಸಂಬಂಧಿಯೊಬ್ಬರು ಆಗ್ರಹಿಸಿದ್ದಾರೆ.
ಸಂಜೆ ದಾಖಲಾದ ದೂರಿನ ಹಿನ್ನೆಲೆ ಐಪಿಸಿ ಸೆಕ್ಷನ್ 304ನಂತೆ ಗುತ್ತಿಗೆದಾರ ಅಜಯ್ ತ್ಯಾಗಿ, ಪುರಸಭೆಯ ಕಾರ್ಯನಿರ್ವಾಹಕ ಅಧಿಕಾರಿ ನಿಹರಿಕಾ ಸಿಂಗ್, ಜೂನಿಯರ್ ಎಂಜಿನಿಯರ್ ಚಂದ್ರ ಪಾಲ್ ಮತ್ತು ಮೇಲ್ವಿಚಾರಕ ಆಶಿಸ್ ವಿರುದ್ಧ ನಿರ್ಲಕ್ಷದ ಸಾವಿನ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ , ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. “ಈ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಹತ್ತಿರದ ಮತ್ತು ಆತ್ಮೀಯರಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳುವ ಭರವಸೆ ಇದೆ” ಎಂದು ಮೋದಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಸಾವನ್ನಪ್ಪಿದ ಪ್ರತಿಯೊಬ್ಬರ ಕುಟುಂಬಗಳಿಗೆ ಆರ್ಥಿಕ ಪರಿಹಾರವಾಗಿ ಸಿಎಂ ಆದಿತ್ಯನಾಥ್ 2 ಲಕ್ಷ ರೂ. ಘಟನೆಯ ಬಗ್ಗೆ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಮೀರತ್ನ ವಿಭಾಗೀಯ ಆಯುಕ್ತ ಮತ್ತು ಪೊಲೀಸ್ ವಲಯದ ಹೆಚ್ಚುವರಿ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರೆ.
ಗಾಜಿಯಾಬಾದ್ನ ಸಂಸತ್ ಸದಸ್ಯರಾಗಿರುವ ಕೇಂದ್ರ ಸಚಿವ ವಿ.ಕೆ.ಸಿಂಗ್ ಮತ್ತು ಹಲವಾರು ಹಿರಿಯ ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳು ಅಪಘಾತ ಸ್ಥಳಕ್ಕೆ ಭೇಟಿ ನೀಡಿದರು . ಸ್ಥಳೀಯ ಬಿಜೆಪಿ ಶಾಸಕರಾಗಿರುವ ಉತ್ತರ ಪ್ರದೇಶದ ಆರೋಗ್ಯ ಸಚಿವ ಅತುಲ್ ಗರ್ಗ್ ಅವರು ಗಾಯಾಳುಗಳನ್ನು ಭೇಟಿಯಾದರು.