ನವದೆಹಲಿ: ಕಳ್ಳಸಾಗಾಣಿಕೆ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹತ್ವದ ಕ್ರಮಕ್ಕೆ ಮುಂದಾಗಿದ್ದು, ಗಡಿರೇಖೆಯನ್ನು ರಿ ಮ್ಯಾಪ್ ಮಾಡಿ ಸಂಪೂರ್ಣವಾಗಿ ಸೀಲ್ ಮಾಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಗಡಿ ಪ್ರದೇಶಗಳನ್ನು ರಿ ಮ್ಯಾಪ್ ಮಾಡಿದ ಬಳಿಕ ಸಂಪೂರ್ಣವಾಗಿ ಸೀಲ್ ಮಾಡಲಾಗುತ್ತದೆ. ಇದಕ್ಕೆ ವಿಶೇಷ ತಂಡವನ್ನು ಗೃಹ ಸಚಿವ ಅಮಿತ್ ಶಾ ಅವರು ರಚಿಸಿದ್ದಾರೆ ಎಂದು ಗೃಹ ಸಚಿವಾಲಯದ ಮೂಲಗಳು ಹೇಳಿವೆ.
ಗಡಿ ಪ್ರದೇಶಗಳನ್ನು ರಿ ಮ್ಯಾಪ್ ಮಾಡುವಂತೆ ಎಲ್ಲಾ ಅರೆ ಮಿಲಿಟರಿ ಪಡೆಗಳಿಗೆ ಸೂಚಿಸಲಾಗಿದೆ ಮತ್ತು ಇದರ ಬಳಿಕ ಭಾರತದೊಳಗೆ ಕಳ್ಳಸಾಗಾಣಿಕೆ ಮಾಡುವಂತಹ ಪ್ರದೇಶಗಳನ್ನು ಗುರುತಿಸಿ, ಅಲ್ಲಿ ಗಡಿ ಬೇಲಿಯನ್ನು ಮತ್ತಷ್ಟು ಭದ್ರ ಮಾಡಲು ಸೂಚಿಸಲಾಗುವುದು ಎಂದು ಗೃಹ ಇಲಾಖೆಯು ನಿರ್ದೇಶನ ನೀಡಿದೆ.