ನವದೆಹಲಿ: ಡಿಸೆಂಬರ್ 6ರಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟಿ29 ಸರಣಿಯಲ್ಲಿ ಆರಂಭಿಕ ಶಿಖರ್ ಧವನ್ ಮತ್ತು ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾ ಗಾಯಾಳು ಸಮಸ್ಯೆಯಿಂದಾಗಿ ಆಡುತ್ತಿಲ್ಲ.
ವೃದ್ಧಿಮಾನ್ ಸಾಹಾ ಬಲಕೈಯ ಉಂಗುರ ಬೆರಳಿಗೆ ಶಸ್ತ್ರಚಿಕಿತ್ಸೆಯಾಗಿದೆ. ಆಯ್ಕೆ ಸಮಿತಿಯು ತಂಡಕ್ಕೆ ಸಂಜು ಸ್ಯಾಮನ್ಸ್ ನ್ನು ಅವರನ್ನು ಧವನ್ ಜಾಗಕ್ಕೆ ಆಯ್ಕೆ ಮಾಡಿದೆ. ಮುಷ್ತಾಕ್ ಅಲಿ ಟ್ರೋಫಿ ವೇಳೆ ಧವನ್ ಗಾಯಾಳುವಾಗಿದ್ದು.
ಮೂರು ಟಿ20 ಪಂದ್ಯಗಳಿಗೆ ತಂಡ: ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ(ಉಪನಾಯಕ), ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ರಿಷಬ್ ಪಂತ್(ವಿ.ಕೀ.) ಶಿವಮ್ ದುಬೆ, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ದೀಪಕ್ ಚಾಹರ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಸಂಜು ಸ್ಯಾಮ್ಸನ್.