ಶ್ರೀನಗರ: ಇಲ್ಲಿನ ಕಾಶ್ಮೀರ ವಿಶ್ವ ವಿದ್ಯಾನಿಲಯದ ಹೊರಗಡೆ ಸ್ಫೋಟ ಸಂಭವಿಸಿ, ಇಬ್ಬರು ಗಾಯಗೊಂಡಿರುವ ಘಟನೆಯು ಮಂಗಳವಾರ ನಡೆದಿದೆ.
ಇದು ಪೆಟ್ರೋಲ್ ಬಾಂಬ್ ಅಥವಾ ಗ್ರೆನೇಡ್ ನಿಂದ ಮಾಡಿರುವ ಸ್ಫೋಟವೇ ಎಂದು ಪತ್ತೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.