ನವದೆಹಲಿ :ಏರ್ ಇಂಡಿಯಾಕ್ಕೆ 60 ಸಾವಿರ ಕೋಟಿ ಸಾಲವಿದೆ . ದಿನಕ್ಕೆ 20 ಕ್ಕೆ ಕೋಟಿ ನಷ್ಟವಾಗುತ್ತಿದೆ . ಹೀಗಾಗಿ ಖಾಸಗೀಕರಣಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರದೀಪ ಸಿಂಗ್ ಪುರಿ ಹೇಳಿದ್ದಾರೆ .
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, ಏರ್ ಇಂಡಿಯಾ ನಷ್ಟದಲ್ಲಿದ್ದು ,ದಿನಕ್ಕೆ 20 ಕ್ಕೆ ಕೋಟಿ ನಷ್ಟವಾಗುತ್ತಿದೆ . ಆದ್ದರಿಂದ ಬಂಡವಾಳ ಹೂಡಿಕೆ ಸಾಧ್ಯವಿಲ್ಲ . ಹೀಗಾಗಿ ಸಂಸ್ಥೆಯನ್ನು ಮುಚ್ಚಬೇಕು ಅಥವಾ ಮಾರಾಟಮಾಡಬೇಕು. ಈಗಾಗಲೇ ಹಲವು ಕಂಪನಿಗಳು ಹರಾಜುದಾರರು ಮುಂದೆ ಬಂದಿದ್ದಾರೆ , ಇನ್ನು 64 ದಿನದೊಳಗೆ ಖಾಸಗೀಕರಣಕ್ಕೆ ಸಂಬಂಧಿಸಿದ ಪ್ರಕ್ರಿಯೆ ಮುಗಿಯಲಿದೆ ಎಂದು ತಿಳಿಸಿದ್ದಾರೆ .