ಠಾಣೆ: ಅನಾರೋಗ್ಯದಲ್ಲಿದ್ದ ಮಗುವಿನ ನಿರಂತರ ಅಳುವಿಗೆ ಬೇಸತ್ತ ತಾಯಿಯೊಬ್ಬಳು ಆರು ತಿಂಗಳ ಮಗುವನ್ನು ನೀರಿನಲ್ಲಿ ಮುಳುಗಿಸಿ ಸಾಯಿಸಿದ ಘಟನೆ ಬೀಭತ್ಸ ದಲ್ಲಿ ನಡೆದಿದೆ.
ಈ ಸಂಬಂಧ ಭೀವಂಡಿಯ ಧಪ್ಸಿಪಾಡ ಗ್ರಾಮದ ಕಲ್ಪನಾ ಗಾಯಕ್ವಾಡ್ ಎಂಬಾಕೆಯನ್ನು ಪೊಲೀಸರು ಶನಿವಾರ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದ ಮಗ ರಿಶಬ್ ಅಳುತ್ತಿದ್ದತ.
ಇದಕ್ಕೆ ರೋಸಿ ಹೋದ ತಾಯಿ ಕಲ್ಪನಾ ನೀರಿನಲ್ಲಿ ಮುಳುಗಿಸಿ ಮಗುವನ್ನು ಸಾಯಿಸಿದ್ದಾಳೆ. ಆ ಬಳಿಕ ಆಕಸ್ಮಿಕ ಸಾವು ಎಂದು ಬಿಂಬಿಸಲು ಕಲ್ಪನಾ ಪ್ರಯತ್ನಿಸಿದರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಇನ್ನೂ ತನಿಖೆ ವೇಳೇ ಪೊಲೀಸರಿಗೆ ಇದೊಂದು ಕೊಲೆ ಎಂದು ತಿಳಿದು ಬಂದಿದೆ.