ಮುಂಬೈ: ಟೀಂ ಇಂಡಿಯಾ ಬೌಲರ್ಗಳು ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳನ್ನು ಕಡಿಮೆ ಸ್ಕೋರ್ಗೆ ಆಲೌಟ್ ಮಾಡಿದ ಕುರಿತು ಟಿವಿ ವಾಹಿನಿಯೊಂದರಲ್ಲಿ ಮಾತನಾಡಿದ ರಾಝಾ, ಐಸಿಸಿ, ಬಿಸಿಸಿಐ ಮತ್ತು ಭಾರತೀಯ ಬೌಲರ್ಗಳು ಒಟ್ಟಾಗಿ ಪಿತೂರಿ ಮಾಡುತ್ತಿದ್ದಾರೆ ಎಂಬ ಅಸಂಬದ್ಧ ಹೇಳಿಕೆ ನೀಡಿದ್ದರು. ಅಲ್ಲದೆ ವಿಶ್ವಕಪ್ನಲ್ಲಿನ ಡಿಆರ್ಎಸ್ ನಿರ್ಧಾರಗಳು ಸಹ ಭಾರತ ತಂಡದ ಪರವಾಗಿ ಬರುತ್ತಿವೆ ಎಂಬುದು ಅವರ ಇನ್ನೊಂದು ಆರೋಪವಾಗಿತ್ತು.
ಈ ಎಲ್ಲಾ ಆರೋಪಗಳಿಗೆ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಹೌದು. . . ‘ಇಂತಹ ಆರೋಪಗಳನ್ನು ಮಾಡಲು ನಿಮಗೆ ನಾಚಿಕೆಯಾಗಬೇಕು. ಇನ್ಮುಂದೆ ಇಂತಹ ಸುಳ್ಳು ಮತ್ತು ಅಸಂಬದ್ಧ ಮಾತುಗಳನ್ನು ನಿಲ್ಲಿಸಿ. ಆಟದ ಮೇಲೆ ಕೇಂದ್ರೀಕರಿಸಿ. ಕೆಲವೊಮ್ಮೆ ಇತರರ ಯಶಸ್ಸನ್ನು ಆನಂದಿಸಿ. ಇದು ಐಸಿಸಿ ವಿಶ್ವಕಪ್. ನಿಮ್ಮ ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಯಲ್ಲ. ನಿಮ್ಮ ತಂಡದ ಮಾಜಿ ಕ್ರಿಕೆಟಿಗ ವಾಸಿಂ ಭಾಯ್ (ವಾಸಿಂ ಅಕ್ರಮ್) ಹೇಳುವುದನ್ನು ಆಲಿಸಿ. ಕನಿಷ್ಠ ನಿಮ್ಮ ಆಟಗಾರರ ಮೇಲೆ ನಂಬಿಕೆ ಇಡಿ’ ಎಂದು ಶಮಿ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಗಳಲ್ಲಿ ಬರೆದುಕೊಂಡಿದ್ದಾರೆ.