ಮೂಡಿಗೆರೆ: ಒಡಿಸ್ಸಾದ ಭುವನೇಶ್ವರದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರ ಮಟ್ಟದ ಕಬ್ಬಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿದ ತಾಲೂಕಿನ ಅಣುಜೂರು ಸಮೀಪದ ಪ್ಯಾಟೆಹಿತ್ಲು ಗ್ರಾಮದ ಎ.ಎಂ.ರಶ್ಮಿ ಅವರು ಮೂಡಿಗೆರೆಗೆ ಆಗಮಿಸು ತ್ತಿದ್ದಂತೆ ವಿವಿಧ ಸಂಘ ಸಂಸ್ಥೆಗಳಿಂದ ಅದ್ದೂರಿ ಸ್ವಾಗತದೊಂದಿಗೆ ಪಟ್ಟಣದಲ್ಲಿ ಮರವಣಿಗೆ ನಡೆಸಿ ಸಂಭ್ರಮಿಸಲಾಯಿತು.
ಈ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲಾ ಅಮೆಚೂರು ಕಬ್ಬಡಿ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ಕುಮಾರ್ ಮಾತನಾಡಿ, ಗುರಿ ಮತ್ತು ಪರಿಶ್ರಮ ಇದ್ದರೆ ಯಾವ ಸಾಧನೆ ಕೂಡ ಮಾಡಬಹುದೆಂಬುದಕ್ಕೆ ಕ್ರೀಡಾಪಟು ಎ.ಎಂ.ರಶ್ಮಿ ಅವರು ಸಾಕ್ಷಿಯಾಗಿದ್ದಾರೆ. ಸಾಧನೆ ಮಾಡಲು ಕ್ರೀಡಾಪಟುಗಳಲ್ಲಿರುವ ಛಲದ ಜತೆಗೆ ತರಬೇತಿದಾರರ ಶ್ರಮ ಕೂಡ ಅಗತ್ಯ. ಎ.ಎಂ.ರಶ್ಮಿ ಅವರ ಸಾಧನೆ ಜಿಲ್ಲೆಗೆ ಕೀರ್ತಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಈ ಹಿಂದೆ ಬಹಳಷ್ಟು ಮಂದಿ ಕಬ್ಬಡಿ ಕ್ರೀಡಾಪಟುಗಳಿದ್ದರು. ಆದರೆ ಈಗ ಕಬ್ಬಡಿ ಕ್ರೀಡಾಪಟುಗಳ ಸಂಖ್ಯೆ ಕ್ಷೀಣಿಸಿದ್ದರಿಂದ ಮುಂದಿನ ತಲೆಮಾರಿನಲ್ಲಿ ಕಬ್ಬಡಿ ನಶಿಸಿ ಹೋಗಬಾರದು. ಗ್ರಾಮೀಣ ಭಾಗದಲ್ಲಿ ಎಲೆಮರೆಕಾಯಿಯಂತೆ ಇರುವ ಕಬ್ಬಡಿ ಕ್ರೀಡಾಪಟುಗಳನ್ನು ಹೊರ ತರುವ ದೃಷ್ಟಿಯಿಂದ ಅಮೆಚೂರ್ ಕಬ್ಬಡಿ ಸಂಸ್ಥೆ ಹುಟ್ಟು ಹಾಕಲಾಯಿತು. ಯಾರೆ ಕಬ್ಬಡಿಯಲ್ಲಿ ಸಾಧನೆ ಮಾಡಲು ಹೊರಟರೂ ಅವರಿಗೆ ಸ್ಪೂರ್ತಿಯಾಗಿ ನಮ್ಮ ಸಂಸ್ಥೆ ಸಂಪೂರ್ಣ ಸಹಕಾರ ನೀಡುತ್ತಾ ಬಂದಿದೆ. ಎ.ಎಂ.ರಶ್ಮಿ ಅವರ ಸಾಧನೆಯಿಂದ ಕಬ್ಬಡಿ ಕ್ರೀಡಾಪಟುಗಳನ್ನು ಬ