ಬಂಟ್ವಾಳ : ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ವಿಟ್ಲ ಇದರ ವತಿಯಿಂದ ಅಂಬೇಡ್ಕರ್ ಜಯಂತಿ ಪ್ರಯುಕ್ತ ವಿಟ್ಲ ಸರಕಾರಿ ಪ್ರೌಢ ಶಾಲೆಯ ಕ್ರೀಡಾಂಗಣದಲ್ಲಿ ಸಮಿತಿ ಸ್ಥಾಪಕಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು ಇವರ ನೇತೃತ್ವದಲ್ಲಿ ೬೦ ಕೆ ಜಿ ವಿಭಾಗದ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ನಡೆಯಿತು.
ಈ ಪಂದ್ಯಾಟವನ್ನು ನಾಟಿ ವೈದ್ಯ ಗಂಗಾಧರ್ ಪಂಡಿತ್ ಉದ್ಘಾಟಿಸಿದರು. ಸಂಚಾಲಕ ಗೋಪಾಲ್ ಕೆ ನೇರಳಕಟ್ಟೆ, ಸೋಮ ನಾಯ್ಕ ಮಲ್ಯ, ಪ್ರಸಾದ್ ಬೊಳ್ಮಾರು, ಕುಶಾಲಪ್ಪ ಮೂಡಂಬೈಲು, ಮಾಧವ ಕೋಣಾಜೆ, ವಸಂತ ಕುಕ್ಕೆಬೆಟ್ಟು, ನಾಗೇಶ್ ಮುಡಿಪು, ಜಿಲ್ಲಾಧ್ಯಕ್ಷ ಚಂದ್ರಶೇಖರ್ ವಿಟ್ಲ ಮೊದಲಾದವರು ಉಪಸ್ಥಿತರಿದ್ದರು.
ಪ್ರಥಮ ವೈಸಿಜಿ ಗಣೇಶ ನಗರ, ದ್ವಿತೀಯ ನವಯುಗ ವಿಟ್ಲ, ತೃತೀಯ ಡಿಪಿ ಅಕಾಡಮಿ ಕಿಲ್ಲೂರು, ಚತುರ್ಥ ಫ್ರೆಂಡ್ಸ್ ಅಡ್ವಾಳ, ಬೆಸ್ಟ್ ರೈಡರ್ ರಾಕೇಶ್, ಬೆಸ್ಟ್ ಕ್ಯಾಚರ್ ವಿನ್ಯಾಸ್, ಬೆಸ್ಟ್ ಆಲ್ರೌಂಡರ್ ವರುಣ್ ರವರು ಪ್ರಶಸ್ತಿ ಪಡೆದರು.