News Karnataka Kannada
Tuesday, May 07 2024
ಕ್ರೀಡೆ

ವಿಜಯ್ ಹಜಾರೆ ಟ್ರೋಫಿಗೆ ಮುತ್ತಿಕ್ಕಿದ ಕರ್ನಾಟಕ

Photo Credit :

ವಿಜಯ್ ಹಜಾರೆ ಟ್ರೋಫಿಗೆ ಮುತ್ತಿಕ್ಕಿದ ಕರ್ನಾಟಕ

ನವದೆಹಲಿ: ಮಯಾಂಕ್ ಅಗರವಾಲ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಸೌರಾಷ್ಟ್ರವನ್ನು 41 ರನ್ ಗಳಿಗೆ ಮಣಿಸಿದ ಕರ್ನಾಟಕ ವಿಜಯ ಹಜಾರೆ ಟ್ರೋಫಿಯನ್ನು ಗೆದ್ದುಕೊಂಡಿದೆ.

ಮಾಯಾಂಕ್ ಅಗರವಾಲ್ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ 253 ರನ್ ಪೇರಿಸಿತು. ಇದಕ್ಕೆ ಉತ್ತರಿಸಿದ ಸೌರಾಷ್ಟ್ರ, ಚೇತೇಶ್ವರ ಪೂಜಾರ 94 ರನ್ ಹೊರತಾಗಿಯೂ 41 ರನ್ ಗಳಿಂದ ಸೋಲುಂಡಿತು. ಕರ್ನಾಟಕ ಪರ ಪ್ರಸಿದ್ ಕೃಷ್ಣ ಮತ್ತು ಗೌತಮ್ ತಲಾ 3 ವಿಕೆಟ್ ಉರುಳಿಸಿದರು.

ಮಯಾಂಕ್ ಅಗರ್ ವಾಲ್ 90, ಸಮರ್ಥ್ 48, ದೇಶಪಾಂಡೆ 49 ಮತ್ತು ಗೋಪಾಲ್ 31 ರನ್ ಮಾಡಿ ಕರ್ನಾಟಕದ ಉತ್ತಮ ಮೊತ್ತಕ್ಕೆ ನೆರವಾದರು. ಮಕ್ವಾನಾ 4 ಮತ್ತು ಮಂಕಡ್ 2 ವಿಕೆಟ್ ಉರುಳಿಸಿ ಕರ್ನಾಟಕ ದೊಡ್ಡ ಮೊತ್ತ ಪೇರಿಸದಂತೆ ತಡೆದರು.

ಮಯಾಂಕ್ ಅಗರವಾಲ್ ದೇಶೀಯ ಟೂರ್ನಮೆಂಟ್ ನಲ್ಲಿ 2000 ರನ್ ಬಾರಿಸಿದ ಮೊದಲ ಆಟಗಾರನೆಂಬ ಸಾಧನೆ ಮಾಡಿದರು. ಅಗರವಾಲ್ ಈ ಋತುವಿಲ್ಲಿ ಒಟ್ಟು 2141 ರನ್ ಮಾಡಿದ್ದಾರೆ.

ಈ ಗೆಲುವಿನ ಬಳಿಕ ಕರ್ನಾಟಕದ ವೇಗಿ ಶ್ರೀನಾಥ್ ಅರವಿಂದ್ ಅವರು ದೇಶೀಯ ಕ್ರಿಕೆಟಿನಿಂದ ನಿವೃತ್ತಿ ಪಡೆದುಕೊಂಡರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು