News Karnataka Kannada
Wednesday, May 08 2024
ಕ್ರೀಡೆ

ಮುಂಬೈ ಇಂಡಿಯನ್ಸ್​ ತಂಡದ ಆಲ್​ರೌಂಡರ್​ ಅರ್ಜುನ್ ತೆಂಡೂಲ್ಕರ್ ಗಾಯ : ಮುಂಬೈ ತಂಡವನ್ನು ಸೇರಿದ ವೇಗಿ ಸಿಮರ್ಜೀತ್​ ಸಿಂಗ್​

New Project (6)
Photo Credit :

ಮುಂಬೈ ಇಂಡಿಯನ್ಸ್​ ತಂಡದ ಆಲ್​ರೌಂಡರ್​ ಅರ್ಜುನ್ ತೆಂಡೂಲ್ಕರ್ ಗಾಯದ ಸಮಸ್ಯೆಯಿಂದ​ 2021ರ ಐಪಿಎಲ್​ನಿಂದ ಹೊರಬಿದ್ದಿದ್ದಾರೆ. ಅವರ ಬದಲಿ ಆಟಗಾರನಾಗಿ ದೆಹಲಿ ವೇಗಿ ಸಿಮರ್ಜೀತ್​ ಸಿಂಗ್​ ಮುಂಬೈ ತಂಡವನ್ನು ಸೇರಿಕೊಂಡಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡ ಗಾಯಗೊಂಡಿರುವ ಅರ್ಜುನ್ ತೆಂಡೂಲ್ಕರ್​ ಅವರ ಬದಲಿಗೆ ಸಿಮರ್ಜೀತ್​ ಸಿಂಗ್ ಅವರನ್ನು 2021ರ ಐಪಿಎಲ್​ಗಾಗಿ ತಂಡಕ್ಕೆ ಸೇರಿಸಿಕೊಂಡಿದೆ. ಐಪಿಎಲ್ ನಿಯಮಾವಳಿಗಳ ಪ್ರಕಾರ ಕಡ್ಡಾಯ ಕ್ವಾರಂಟೈನ್ ಮಾಡಿದ ನಂತರ ತಂಡದ ಜೊತೆಗೆ ಅಭ್ಯಾಸ ಆರಂಭಿಸಲಿದ್ದಾರೆ ಎಂದು ಫ್ರಾಂಚೈಸಿ ಬುಧವಾರ ಪ್ರಕಟಣೆ ಹೊರಡಿಸಿದೆ.

23 ವರ್ಷದ ಸಿಮರ್ಜೀತ್ ಅವರಿಗೆ ಇದು ಮೊದಲ ಐಪಿಎಲ್ ಆಗಲಿದೆ. ಬೌಲರ್​ 2018ರ ಸೆಪ್ಟೆಂಬರ್​ನಲ್ಲಿ ದೆಹಲಿ ತಂಡದ ಪರ ಲಿಸ್ಟ್​ ಎ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಎರಡು ತಿಂಗಳ ನಂತರ ಪ್ರಥಮ ದರ್ಜೆ ಕ್ರಿಕೆಟ್​ಗೆ ಕಾಲಿಟ್ಟದ್ದರು. 2019ರಲ್ಲಿ ಟಿ20 ಕ್ರಿಕೆಟ್​ಗೆ ಎಂಟ್ರಿ ಕೊಟ್ಟಿದ್ದರು. ಸಿಮರ್ಜೀತ್ ಸಿಂಗ್ ದೆಹಲಿ ಪರ 10 ಪ್ರಥಮ ದರ್ಜೆ, 19 ಲಿಸ್ಟ್ ಎ ಮತ್ತು 15 ಟಿ20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 37, 19 ಮತ್ತು 18 ವಿಕೆಟ್​ಗಳನ್ನು ಪಡೆದಿದ್ದಾರೆ.

ಸಿಂಗ್ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಭಾರತ ತಂಡದಲ್ಲಿ ನೆಟ್​ ಬೌಲರ್ ಆಗಿ ಆಯ್ಕೆಯಾಗಿದ್ದರು. ಆದರೆ ಕೃನಾಲ್ ಪಾಂಡ್ಯಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರ ಜೊತೆಗೆ ಸಂಪರ್ಕದಲ್ಲಿದ್ದ 8 ಮಂದಿ ಕ್ವಾರಂಟೈನ್‌ಗೆ ಒಳಗಾಗಿದ್ದರು. ಈ ವೇಳೆ ಸಿಮರ್ಜೀತ್​ ಭಾರತದ 15ರ ಬಳಗಕ್ಕೆ ಸೇರಿಕೊಂಡಿದ್ದರು. ಆದರೆ ಒಂದೂ ಪಂದ್ಯದಲ್ಲೂ ಅವಕಾಶ ಪಡೆದಿರಲಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು