ಸಿಡ್ನಿ: ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿರುವ ಆಸ್ಟ್ರೇಲಿಯಾ ಕಪ್ತಾನ ಸ್ಟೀವ್ ಸ್ಮಿತ್ ಅವರು ದಕ್ಷಿಣ ಆಫ್ರಿಕಾದಿಂದ ತವರಿಗೆ ಮರಳಿದ ಬಳಿಕ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟರು.
ನನ್ನಿಂದ ತಪ್ಪಾಗಿದೆ. ನನ್ನ ಸರ್ವನಾಶವಾಗಿದೆ ಎಂದು ಸ್ಮಿತ್ ಅವರು ಕಣ್ಣೀರಿಟ್ಟರು.
ಚೆಂಡು ವಿರೂಪ ಪ್ರಕರಣದ ಸಂಪೂರ್ಣ ಹೊಣೆ ನಾನು ಹೊರುತ್ತೇನೆ. ವಸ್ತುಸ್ಥಿತಿ ಮತ್ತು ಪರಿಣಾಮ ಅಳೆಯಲು ನನ್ನಿಂದ ಗಂಭೀರ ಪ್ರಮಾದವಾಗಿದೆ. ನಾಯಕತ್ವದಲ್ಲಿ ಸಂಪೂರ್ಣ ವಿಫಲನಾಗಿದ್ದೇನೆ ಎಂದು ಸ್ಮಿತ್ ಕಣೀರು ಹಾಕುತ್ತಲೇ ಹೇಳಿದರು.
ತಪ್ಪನ್ನು ತಿದ್ದಿಕೊಳ್ಳಲು ನನ್ನಿಂದ ಸಾಧ್ಯವಿರುವಷ್ಟು ಪ್ರಯತ್ನ ಮಾಡುತ್ತೇನೆ. ಅದರಿಂದ ಒಳ್ಳೆಯದಾದರೆ ಅದು ನನಗೊಂದು ಪಾಠವಾಗಬೇಕು. ನಾನು ಬದಲಾವಣೆಯ ಒಂದು ಶಕ್ತಿಯಾಗಲು ಬಯಸಿದ್ದೇನೆ. ನನ್ನ ಮುಂದಿನ ದಿನಗಳಲ್ಲಿ ತಪ್ಪಿಗಾಗಿ ವಿಷಾದ ಪಡುವಂತಾಗಿದೆ. ನಾನು ಪೂರ್ತಿ ಕುಸಿದುಹೋಗಿದ್ದೇನೆ ಎಂದರು.