News Karnataka Kannada
Sunday, May 19 2024
ಕರ್ನಾಟಕ

ಕಾಂಗ್ರೆಸ್ಸ್ ಸಂಸದನ ದೇಶ ವಿಭಜನೆಯ ಹೇಳಿಕೆಗೆ ಪಕ್ಷದಲ್ಲೇ ಆಕ್ಷೇಪ; ಇದನ್ನು ಸಹಿಸಲಾಗದು ಎಂದ ಖರ್ಗೆ

ಬಜೆಟ್ ನಲ್ಲಿ ತಾರತಮ್ಯವಾಗಿದೆ ಎಂದು ಆರೋಪಿಸಿ ದಕ್ಷಿಣದಲ್ಲಿ ಪ್ರತ್ಯೇಕ ರಾಷ್ರಕ್ಕೆ ಬೇಡಿಕೆ ಇಡಬೇಕಾಗುತ್ತದೆ ಎಂದು ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಡಿ.ಕೆ ಸುರೇಶ್ ಗೆ ಸ್ವಪಕ್ಷದವರಿಂದಲೇ ಬೆಂಬಲ ಸಿಗದಾಗಿದೆ.
Photo Credit : News Kannada

ನವದೆಹಲಿ: ಬಜೆಟ್ ನಲ್ಲಿ ತಾರತಮ್ಯವಾಗಿದೆ ಎಂದು ಆರೋಪಿಸಿ ದಕ್ಷಿಣದಲ್ಲಿ ಪ್ರತ್ಯೇಕ ರಾಷ್ರಕ್ಕೆ ಬೇಡಿಕೆ ಇಡಬೇಕಾಗುತ್ತದೆ ಎಂದು ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಡಿ.ಕೆ ಸುರೇಶ್ ಗೆ ಸ್ವಪಕ್ಷದವರಿಂದಲೇ ಬೆಂಬಲ ಸಿಗದಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ಸ್ ಅಧ್ಯಕ್ಷ ಮಲ್ಲಿಕಾರ್ಜಿನ ಖರ್ಗೆ, ಇಂತಹ ವಿಭಜನೆಯ ಮಾತುಗಳನ್ನು ಸಹಿಸಲಾಗುವುದಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಾರತ ಒಂದು ಎಂದು ಹೇಳಿದ್ದಾರೆ.

ಡಿ.ಕೆ ಸುರೇಶ್ ಹೆಸರನ್ನು ಉಲ್ಲೇಖಿಸದೆ ಹೇಳಿಕೆ ನೀಡಿದ ವಾಣಿಜ್ಯ ಸಚಿವ ಪೀಯೂಷ್ ಗೋಯಲ್, ಕಾಂಗ್ರೆಸ್ಸ್ ನಲ್ಲಿ ವಿಭಜಕ ಶಕ್ತಿಗಳು ಇನ್ನೂ ಜೀವಂತವಾಗಿರುವುದಕ್ಕೆ ಇದು ಉದಾಹರಣೆ ಎಂದರು.

ತಮ್ಮ ಹೇಳಿಕೆಗೆ ಹಲವಾರು ಟೀಕೆಗಳು ಬಂದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಸುರೇಶ್, ವಿವಾದ ಸೃಷ್ಟಿಸಲು ಬಿಜೆಪಿ ನನ್ನ ಹೇಳಿಕೆಯನ್ನು ತಿರುಚಿದ್ದಾರೆ ಎಂದು ಆರೋಪಿಸಿದರು. ʼಕರ್ನಾಟಕವು ಭಾರತದ ಭಾಗವಾಗಿಯೇ ಮುಂದುವರಿಯುತ್ತದೆ. ದಕ್ಷಿಣದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯವನ್ನು ಹೇಳಿದ್ದೇನೆʼ ಎಂದು ಸ್ಪಷ್ಟನೆ ಕೊಡುವ ಪ್ರಯತ್ನ ಮಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು