ಸರಗೂರು: ಸರಗೂರು ತಾಲೂಕಿನ ಶಂಖಹಳ್ಳಿ ಗ್ರಾಮದ ಗ್ರಾಮದೇವತೆಯಾದ ಶಂಖಮ್ಮನವರ ದೇವಸ್ಥಾನದ ಗೋಪುರ ಹಾಗೂ ಕಳಸ ಪ್ರತಿಷ್ಠಾಪನೆ ಸಮಾರಂಭವನ್ನು ಜ.26, 27 ಹಾಗೂ 28ರ ಮೂರೂ ದಿನಗಳ ಕಾಲ ಆಯೋಜಿಸಲಾಗಿದೆ ಎಂದು ಗ್ರಾಮದ ಮುಂಖಡರು ತಿಳಿಸಿದ್ದಾರೆ.
ಜ.26ರ ಸಂಜೆ ಐದು ಗಂಟೆಗೆ ಸಲ್ಲುವ ಗೋದೂಳಿ ಲಗ್ನದಲ್ಲಿ ಕಪಿಲಾ ನದಿಯಲ್ಲಿ ಗಂಗಾ ಪೂಜೆ, ಗೋ ಪೂಜೆ ನೆರವೇರಿಸಲಾಗುವುದು. ಬಳಿಕ ಗಣಪತಿ ಹೋಮ, ಮೃತ್ಯುಂಜಯ ಹೋಮ ಮತ್ತು ಊಮಾಮಹೇಶ್ವರಿ ಹೋಮ ನೆರವೇರಿಸಲಾಗುವುದು.
ಜ.27ರ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಶಂಖಮ್ಮ ದೇವಿಗೆ ಅಭಿಷೇಕ ಪೂಜೆ ನಡೆಸಿ ನಂತರ ಕಪಿಲಾ ನದಿಗೆ ತೆರಳಿ ಹಾಲ್ಹರವಿ ಸಮೇತ ವೀರಗಾಸೆ, ಡೊಳ್ಳು ಕುಣಿತ, ಕಳಸ ತಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು. ಬಳಿಕ ಶಂಖಮ್ಮ ದೇವಾಲಯದಲ್ಲಿ ಕಳಸ ಸ್ಥಾಪನೆ ನೆರವೇರಿಸಲಾಗುವುದು.
ಬಳಿಕ ಭಕ್ತರಿಗೆ ದರ್ಶನ ವ್ಯವಸ್ಥೆ ಕಲ್ಪಿಸಲಾಗುವುದು. ನಂತರ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಗ್ರಾಮದ ಮುಖಂಡರಾದ ಗೌಡಿಕೆ ರಾಜಪ್ಪ, ಶಿವನಂಜಪ್ಪ, ಗ್ರಾಪಂ ಸದಸ್ಯರಾದ ವರದನಾಯಕ, ಕೆಂಪನಾಯಕ, ಮಾಜಿ ಗ್ರಾಪಂ ಸದಸ್ಯರಾದ ಗಿರಿನಾಯಕ, ತಿಮ್ಮನಾಯಕ, ತಮ್ಮಯ್ಯನಾಯಕ, ಸಣ್ಣಶೆಟ್ಟಿ ತಿಳಿಸಿದ್ದಾರೆ.