ಹುಣಸೂರು: ಇಂದು ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ನಾಪಂಡ ಮುತ್ತಪ್ಪ ಕಾಂಗ್ರೆಸ್ ಗೆ ಮತ್ತೆ ಸೇಪ೯ಡೆಯಾದರು.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಕಾಂಗ್ರೆಸ್ ಧ್ವಜವನ್ನು ಮುತ್ತಪ್ಪ ಅವರಿಗೆ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು. ಇದೇ ಸಂದಭ೯ ಜೈ ಜೈ ಕಾಂಗ್ರೆಸ್ ಎಂದು ಮುತ್ತಪ್ಪ ಹಷ೯ದಿಂದ ಘೋಷಿಸಿದರು.
ಮುತ್ತಪ್ಪ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯಥಿ೯ಯಾಗಿ ಸ್ಪಧಾ೯ ಕಣದಲ್ಲಿದ್ದರು. ಕೊಡಗು ಜೆಡಿಎಸ್ ಅಧ್ಕಕ್ಷರಾಗಿಯೂ ಕಾಯ೯ನಿವ೯ಹಿಸಿದ್ದರು. ಅಪಾರ ಬೆಂಬಲಿಗರೊಂದಿಗೆ ತಾನು ಕಾಂಗ್ರೆಸ್ ಸೇಪ೯ಡೆಯಾಗಿರುವುದಾಗಿ ನಾಪಂಡ ಮುತ್ತಪ್ಪ ಹೇಳಿದರು.
ಈ ವೇಳೆ ಕಾಂಗ್ರೆಸ್ ಮುಖಂಡ ಹೆಚ್. ಎಸ್. ಚಂದ್ರ ಮೌಳಿ ಹಾಜರಿದ್ದರು. ಮೂರು ವಷ೯ಗಳ ಹಿಂದಿನವರೆಗೂ ನಾಪಂಡ ಮುತ್ತಪ್ಪ ಕಾಂಗ್ರೆಸ್ ಕಾಮಿ೯ಕ ಘಟಕದ ರಾಜ್ಯಾಧ್ಯಕ್ಷರಾಗಿದ್ದವರು. ಇದೀಗ ಮರಳಿ ಕಾಂಗ್ರೆಸ್ ಗೆ ನಾಪಂಡ ಮುತ್ತಪ್ಪ ಸೇರಿದ್ದಾರೆ.