ಮೈಸೂರು: ಅಂದಕಾಸುರ ಸಂಹಾರಕ್ಕೆವಿರೋಧ ವ್ಯಕ್ತಪಡಿಸಿದ ದಲಿತ ಸಂಘರ್ಷ ಸಮಿತಿ ಸದಸ್ಯರು ನಂಜುಂಡೇಶ್ವರ ಉತ್ಸವ ಮೂರ್ತಿಗೆ ಎಂಜಲು ನೀರು ಎರಚಿದ್ದಾರೆ ಎಂದು ಆರೋಪ ಕೇಳಿ ಬರುತ್ತಿದೆ.
ನಿನ್ನೆ (ಡಿ.26) ರಂದು ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದ ಬಳಿ ಇರುವ ರಾಕ್ಷಸ ಮಂಟಪದ ಮುಂದೆ ಅಂದಕಾಸುರನ ಚಿತ್ರವನ್ನು ರಂಗೋಲಿ ಮೂಲಕ ಬಿಡಿಸಲಾಗಿತ್ತು.
ಬಳಿಕ ನಂಜುಂಡೇಶ್ವರ, ಪಾರ್ವತಿ ದೇವರ ಉತ್ಸವ ಮೂರ್ತಿ ಹೊತ್ತವರು ಆ ಮಂಟಪದ ಬಳಿ ಬಂದು ಅಂದಕಾಸುರನ ರಂಗೋಲಿಯನ್ನು ಕಾಲಿನಿಂದ ಅಳಿಸಿ ಹಾಕುತ್ತಾರೆ. ಈ ಮೂಲಕ ಅಂದಕಾಸುರನ ಸಂಹಾರ ದಿನ ಆಚರಿಸಲಾಗುತ್ತದೆ. ಮಂಗಳವಾರ ನಡೆಯುತ್ತಿದ್ದ ಈ ಆಚರಣೆಗೆ ದಲಿತ ಹೋರಾಟ ಸಮಿತಿ ವಿರೋಧ ವ್ಯಕ್ತಪಡಿಸಿತ್ತು.