ನಂಜನಗೂಡು: ತಾಲೂಕಿನ ಒಡೆಯನಪುರ ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಬಲಿಯಾಗಿರುವ ಘಟನೆ ನಡೆದಿದೆ.
ಗ್ರಾಮದ ನಾಗರಾಜಗೌಡ ಎಂಬ ರೈತ ಜಮೀನಿನಲ್ಲಿ ಜಾನುವಾರುಗಳನ್ನು ಮೇಯಿಸುತ್ತಿದ್ದ ವೇಳೆ ಪೊದೆಯೊಳಗೆ ಅವಿತು ಕುಳಿತಿದ್ದ ಹುಲಿ ದಾಳಿ ನಡೆಸಿದೆ ಹುಲಿಯನ್ನು ಕಂಡೂ ರೈತ ಭಯಭೀತಿಯಿಂದ ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಸುವಿನ ಮೇಲೆ ದಾಳಿ ನಡೆಸಿ ಅರೆಬೆರೆ ತಿಂದು ಬಿಸಾಡಿ ಹೋಗಿದೆ ಇನ್ನು ಈ ಭಾಗದಲ್ಲಿ ಕಾಡುಪ್ರಾಣಿಗಳ ಕಾಟ ಹೆಚ್ಚಾಗಿದ್ದು ಕಳೆದ ದಿನಗಳಿಂದಷ್ಟೇ ಹುಲಿ ದಾಳಿಗೆ ರೈತರು ಒಬ್ಬರು ಮೃತಪಟ್ಟಿದ್ದರು ಇದರಿಂದ ನಾವು ಜಮೀನುಗಳಿಗೆ ತೆರಳಲು ತುಂಬಾ ತೊಂದರೆಯಾಗುತ್ತಿದೆ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇರಿಸಿ ಹುಲಿಯನ್ನು ಸೆರೆಹಿಡಿಯಬೇಕು ಹಾಗೂ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯ ಮಾಡಿದ್ದಾರೆ.