ಮೈಸೂರು: ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕನ ಮೇಲೆ ಕಾಡುಹಂದಿ ದಾಳಿ ನಡೆಸಿದ ಹಿನ್ನೆಲೆ ವ್ಯಕ್ತಿಯೋರ್ವ ಗಂಭೀರ ಗಾಯಗೊಂಡ ಘಟನೆ ಎಚ್.ಡಿ.ಕೋಟೆ ತಾಲೂಕಿನ ಮೊತ್ತ ಗ್ರಾಮದ ಬಳಿ ಇಂದು ಮುಂಜಾನೆ ನಡೆದಿದೆ.
ಗಾಯಗೊಂಡ ಕಾರ್ಮಿಕನನ್ನು ಮೊತ್ತಕೆರೆ ಹಾಡಿ ಮರಿಯಯ್ಯ ಎಂದು ಗುರುತಿಸಲಾಗಿದೆ.
ಮರಿಯಯ್ಯ ತನ್ನ ಮೊತ್ತೊಬ್ಬ ಸಹಚರನೊಂದಿಗೆ ಕೂಲಿ ಕೆಲಸಕ್ಕೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮೊತ್ತ ಗ್ರಾಮದ ಬಳಿ ಹಳ್ಳವೊಂದರ ಪೊದೆಯಿಂದ ಹಠಾತ್ ಹೊರ ಬಂದು ಹಂದಿ ದಾಳಿ ನಡೆಸಿದೆ. ಈ ವೇಳೆ ಜೊತೆಗಿದ್ದ ಸಹಚರ ಕಾರ್ಮಿಕ ಹಂದಿ ನೋಡಿ ಕ್ಷಣ ಮಾತ್ರದಲ್ಲಿ ಸ್ಥಳದಿಂದ ಪರಾರಿಯಾಗಿದ್ದನು. ಮರಿಯಯ್ಯನ ಎದೆ ಸೀಳಿ ಕೈಕಾಲು ಮೂಳೆಯನ್ನು ಕಾಡಂದಿ ಮುರಿದಿದೆ.
ಸದ್ಯ ಗಾಯಾಗೊಂಡ ಮರಿಯಯ್ಯನಿಗೆ ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಜಿಲ್ಲಾಸ್ಪತ್ರೆಗೆ ಗಾಯಾಳು ಸ್ಥಳಾಂತರ ಮಾಡಲಾಗಿದೆ.