News Karnataka Kannada
Monday, May 06 2024
ಮೈಸೂರು

ರಂಗಭೂಮಿ ಕಲೆ ಉಳಿವಿಗೆ ಗ್ರಾಮೀಣರು ಕಾರಣ: ಕೆ.ಮರೀಗೌಡ

Villagers responsible for survival of theatre art: K Marigowda
Photo Credit : By Author

ಮೈಸೂರು: ಭಾರತದಲ್ಲಿ ರಂಗಭೂಮಿ ಕಲೆ ಉಳಿದಿರುವುದಕ್ಕೆ ಗ್ರಾಮೀಣ ಜನರು ಕಾರಣರಾಗಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ. ಮರೀಗೌಡ ತಿಳಿಸಿದರು.

ಮೈಸೂರು ತಾಲ್ಲೂಕು, ಹಳೆಕಾಮನಕೊಪ್ಪಲು ಗ್ರಾಮದ ಶ್ರೀ ಭಕ್ತಕನಕದಾಸ ಕೃಪಾಪೋಷಿತ ನಾಟಕ ಮಂಡಳಿಯ ವತಿಯಿಂದ ಶಿವರಾತ್ರಿ ಹಬ್ಬದ ಅಂಗವಾಗಿ ಕಾಂಗ್ರೆಸ್ ಮುಖಂಡ ಕರೀಗೌಡರ ಅಧ್ಯಕ್ಷತೆಯಲ್ಲಿ ನಡೆದ ಶನಿ ಪ್ರಭಾವ ನಾಟಕದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರಿಗೆ ಸಂಕ್ರಾತಿ ಹಬ್ಬ ಆಚರಿಸಿದ ನಂತರ ಬೇಸಿಗೆಯಲ್ಲಿ ಯಾವುದೇ ಕೆಲಸಗಳಿರುವುದಿಲ್ಲ ಆ ಸಮಯದಲ್ಲಿ ಮನರಂಜನೆಗಾಗಿ ಪೌರಾಣಿಕ, ಸಾಮಾಜಿಕ ನಾಟಕಗಳನ್ನು ಕಲಿತು ನೆಂಟರನ್ನೆಲ್ಲಾ ಕರೆದು ಹಬ್ಬವನ್ನೇ ಆಚರಣೆ ಮಾಡಿದಂತೆ ನಾಟಕಗಳನ್ನು ಪ್ರದರ್ಶನ ಮಾಡಿ ಸಂಭ್ರಮಿಸುತ್ತಾರೆ ಇಂತಹ ಕಲಾವಿದರಿಂದಲೇ ಇಂದು ಭಾರತದಲ್ಲಿ ಕಲೆ ಸಂಸ್ಕೃತಿ, ಜಾನಪದ ಕಲೆಗಳು ಇನ್ನೂ ಜೀವಂತವಾಗಿವೆ. ಆದ್ದರಿಂದ ಸರ್ಕಾರ ರಂಗ ಭೂಮಿಕಲೆಯನ್ನು ಬೆಳೆಸುವುದರ ಜೊತೆಗೆ ಕಲಾವಿದರನ್ನು ಪ್ರೋತ್ಸಾಯಿಸಬೇಕು ಎಂದರು.

ಸಮಾರಂಭದಲ್ಲಿ ಮೈಮುಲ್ ಮಾಜಿಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ, ಜಿ.ಪಂ. ಮಾಜಿ ಸದಸ್ಯರಾದ ಬೀರಿಹುಂಡಿ ಬಸವಣ್ಣ, ಅರುಣ್‌ಕುಮಾರ್, ರಾಕೇಶ್ ಪಾಪಣ್ಣ, ನಾಗವಾಲ ಗ್ರಾ.ಪಂ. ಅಧ್ಯಕ್ಷ ನರೇಂದ್ರ, ಗ್ರಾ.ಪಂ. ಸದಸ್ಯರಾದ ಹಳೆಕಾಮನಕೊಪ್ಪಲು, ಕರೀಗೌಡ, ಮಟನ್‌ಬಸವೇಗೌಡ, ಸ್ವಾಮಿ, ಕರಕನಹಳ್ಳಿ ಮಂಜು, ರಮೇಶ್, ಸೆಂಟ್ರಿಂಗ್‌ ರವಿಕುಮಾರ್, ಭಾಗ್ಯರಮೇಶ್, ಇಲವಾಲ ಸುರೇಶ್, ಶಿವೇಗೌಡ, ಯಜಮಾನ ನಾಗರಾಜ್, ಬೈರೇಗೌಡ, ಶಿವಲಿಂಗೇಗೌಡ, ದೊಡ್ಡಸ್ವಾಮಿ, ವಕೀಲ ನಾಗೇಶ್, ಲಿಂಗದೇವರಕೊಪ್ಪಲು ಮಂಜು, ಜಗದೀಶ್, ಗಾಂಧಿಕುಮಾರ್, ದಳಪತಿ ಮಹಾದೇವ್, ಸೆಂಟ್ರಿಂಗ್ ಮಂಜು, ಯಜಮಾನ್ ಬೋರೇಗೌಡ, ಶಿವಕುಮಾರ್, ಸಾವಿತ್ರಿ ನಾಗರಾಜ್, ಸೀಗಳ್ಳಿ ನಾಗರಾಜು, ಟಿ. ರಾಜು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು