ಮೈಸೂರು: ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಕಲೆ ಮತ್ತು ಸಂಸ್ಕೃತಿ ಇನ್ನೂ ಜೀವಂತವಾಗಿದೆ ಎಂದು ಗ್ರಾಮಪಂಚಾಯ್ತಿ ಮಾಜಿ ಸದಸ್ಯ ಹಳೆಕಾಮನಕೊಪ್ಪಲು ಕರೀಗೌಡ ತಿಳಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ಲಿಂಗದೇವರಕೊಪ್ಪಲು ಗ್ರಾಮದಲ್ಲಿ ನಡೆದ ಸಂಕ್ರಾಂತಿ ಹಬ್ಬದಲ್ಲಿ ಭಾಗವಹಿಸಿ, ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಹಳ್ಳಿಗಳಲ್ಲಿ ಸುಗ್ಗಿಯ ಕಾಲ ಮುಗಿಯುತ್ತಿದ್ದಂತೆ ರೈತರು ಬೆಳೆದ ದವಸ ಧಾನ್ಯಗಳನ್ನು ಸಂಕ್ರಾಂತಿ ಹಬ್ಬದಂದು ದೇವಸ್ಥಾನದ ಆವರಣದಲ್ಲಿ ರಾಶಿ ಮಾಡಿ. ಪೂಜೆ ಸಲ್ಲಿಸಿ, ಧನಕರುಗಳನ್ನೆಲ್ಲ ತೊಳೆದು ಕಿಚ್ಚನ್ನು ಹಾಯಿಸುತ್ತಾರೆ. ಅದೇರೀತಿ ಈ ಊರಿನಲ್ಲೂ ಸಹ ಮಡಕೆ ಒಡೆಯುವ ಸ್ಪರ್ಧೆ, ಹಗ್ಗಜಗ್ಗಾಟ ಹಾಗೂ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಸಂಭ್ರಮಿಸುತ್ತಿದ್ದೀರಿ ಬೀರೇಶ್ವರ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದರು.
ಈ ಸಂದರ್ಭದಲ್ಲಿ ಇಲವಾಲ ಗ್ರಾ.ಪಂ. ಪಿ.ಡಿ.ಓ ಹೇಮಂತ್ಕುಮಾರ್, ಚಿಕ್ಕಣ್ಣ, ರಮೇಶ್, ಜಗದೀಶ್, ಶಶಾಂಕ್, ಗಾಂಧಿಕುಮಾರ್, ರವಿಕುಮಾರ್, ಬಸವರಾಜು, ಕರೀಗೌಡ, ಕರಕನಹಳ್ಳಿ ಮಂಜುನಾಥ್, ಗ್ರಾಮಸ್ಥರು ಮಹಿಳೆಯರು ಹಾಜರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು.