ಮೈಸೂರು: ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥಯಲ್ಲಿ 2019 ರಿಂದ 2023ರ ಸಾಲಿನ ಬಿ.ಎಸ್.ಸಿ, ಬಿ.ಎಡ್ ಇಂಟಿಗ್ರೇಟೆಡ್ ಶಿಕ್ಷಣದಲ್ಲಿ ಮಾಡಿದ ಅಪೂರ್ವ ಸಾಧನೆಗಾಗಿ ಕೊಡಗಿನ ಬಾನಂಡ ಡಿ.ವಿದ್ಯಾಶ್ರೀ ಅವರಿಗೆ ಮೈಸೂರು ವಿಶ್ವವಿದ್ಯಾಲಯದಿಂದ ಅಕಾಡೆಮಿಕ್ ಎಕ್ಸಲೆನ್ಸ್ ಅವಾರ್ಡ್ ಪ್ರಶಸ್ತಿ ಲಭಿಸಿದೆ.
ಮಡಿಕೇರಿ ಮೂಲದ ಪ್ರಸ್ತುತ ಕುಶಾಲನಗರದ ಕೊಪ್ಪದಲ್ಲಿ ವಾಸವಿರುವ ಇವರು ಹತ್ತನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿ ತೇರ್ಗಡೆ ಹೊಂದಿದ್ದರು. ಹುಣಸೂರು ವನ್ಯಜೀವಿ ವಿಭಾಗದ ದೊಡ್ಡೆ ಹರವೇ ಭಾಗದಲ್ಲಿ ಉಪವಲಯ ಅರಣ್ಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬಾನಂಡ ದೇವಿ ಪ್ರಸಾದ್ ಹಾಗೂ ಪಿ.ಎಂ ನೈನ ದಂಪತಿಗಳ ಪುತ್ರಿಯಾಗಿದ್ದಾರೆ. ಪ್ರಸ್ತುತ ಮೈಸೂರಿನಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎಸ್.ಸಿ.ಎಮ್ ಎಡ್, ಸ್ನಾತಕೋತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.