ನಾಗರಹೊಳೆ: ಜಮೀನಿನಲ್ಲಿದ್ದ ರೈತರೋರ್ವರ ಮೇಲೆ ಹುಲಿ ಭೀಕರ ದಾಳಿ ನಡೆಸಿರುವ ಘಟನೆ ನಾಗರಹೊಳೆ ಅಭಯಾರಣ್ಯದ ಮುದ್ದನಹಳ್ಳಿ ಕೊಪ್ಪಲು ಸಮೀಪ ನಡೆದಿದೆ.
ನಾಗರಹೊಳೆ ಅಭಯಾರಣ್ಯದ ಮುದ್ದನಹಳ್ಳಿ ಕೊಪ್ಪಲು ಸಮೀಪದ ಪಂಚವಳ್ಳಿ ಎಂಬಲ್ಲಿ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದ್ದು ರೈತ ಸಾವು ಬದುಕಿನ ಮದ್ಯೆ ಹೋರಾಡುತ್ತಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹುಲಿ ಹಠಾತ್ ದಾಳಿ ನಡೆಸಿದೆ ಎನ್ನಲಾಗುತ್ತಿದ್ದು, ಹುಲಿ ದಾಳಿಗೊಳಗಾದ ರೈತನನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.