ಅಗರ್ತಲಾ: ಇಂಡಿಗೋ ವಿಮಾನದ ಮಧ್ಯಭಾಗದ ತುರ್ತು ನಿರ್ಗಮನ ಬಾಗಿಲು ತೆರೆಯಲು ಪ್ರಯತ್ನಿಸಿದ ಮತ್ತು ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಪ್ರಯಾಣಿಕರೊಬ್ಬರನ್ನು ಅಗರ್ತಲಾ ವಿಮಾನ ನಿಲ್ದಾಣದಲ್ಲಿ ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಸ್ವಜಿತ್ ದೇಬನಾಥ್ (41) ಎಂಬಾತ ಗುವಾಹಟಿ-ಅಗರ್ತಲಾ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ವಿಮಾನದ ತುರ್ತು ನಿರ್ಗಮನವನ್ನು ತೆರೆಯಲು ಪ್ರಯತ್ನಿಸಿದ್ದಾಗಿ ತ್ರಿಪುರಾ ಪೊಲೀಸ್ ವಕ್ತಾರ ಜ್ಯೋತಿಸ್ಮನ್ ದಾಸ್ ಚೌಧರಿ ಹೇಳಿದ್ದಾರೆ.
ದೇಬನಾಥ್ ಮಾದಕ ದ್ರವ್ಯ ಸೇವಿಸಿ ಈ ಕೃತ್ಯ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವಿಮಾನವು ಅಗರ್ತಲಾದ ಮಹಾರಾಜ ಬೀರ್ ಬಿಕ್ರಮ್ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಪೊಲೀಸರು ದೇಬನಾಥ್ ಆತನನ್ನು ಬಂಧಿಸಿದ್ದಾರೆ.