News Karnataka Kannada
Friday, May 03 2024
ಮೈಸೂರು

ತಿ.ನರಸೀಪುರ: ಬನ್ನೂರಿನಲ್ಲಿ ವಿಶ್ವ ಸ್ವಯಂ ಸೇವಕರ ದಿನಾಚರಣೆ

Mys
Photo Credit : By Author

ತಿ.ನರಸೀಪುರ: ಮೈಸೂರಿನ ಯುವ ನೆಹರು ಕೇಂದ್ರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಲಿಯೂರು ಮತ್ತು ನನ್ನವ್ವ ಸಾಂಸ್ಕೃತಿಕ ಕಲಾತಂಡದ ಸಹಯೋಗದೊಂದಿಗೆ ತಾಲೂಕಿನ ಮಲಿಯೂರಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರ ರಾಷ್ಟ್ರೀಯ ಸ್ವಯಂ ಸೇವಕರ ದಿನಾಚರಣೆ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮೈಸೂರು ಮಹಾರಾಜಾ ಕಾಲೇಜಿನ ಅಧ್ಯಾಪಕಿ ಡಾ .ದೀನಾಮಣಿ ಆಧುನಿಕ ಪ್ರಪಂಚ ಯಾಂತ್ರಿಕ ಮತ್ತು ವ್ಯಾಪಾರೀಕರಣದ ಕರಾಳತೆಯಿಂದ ನಲುಗಿ ಹೋಗಿದೆ. ಮನುಷ್ಯನಲ್ಲಿ ಮಾನವೀಯತೆ ಎಂದರೆ ಏನು ಎಂಬುದನ್ನು ಹುಡುಕಬೇಕಿದೆ. ಇವೆಲ್ಲದರ ನಡುವೆ ಅಂತಃಕರಣವುಳ್ಳ ಬೆರಳೆಣಿಕೆ ವ್ಯಕ್ತಿಗಳು ಮಾತ್ರ ಮನುಜ ಧರ್ಮದ ಉಳಿವಿಗಾಗಿ ತಮ್ಮ ಮುಖೇನ ಅಥವಾ ಅಧಿಕಾರಿಗಳ ಮೂಲಕ ಮಾಡುವ ಸಾತ್ವಿಕ ಕಾಯಕವೇ ಸ್ವಯಂ ಸೇವೆ. ಸ್ವಯಂ ಸೇವೆಯಲ್ಲಿ ಯಾವುದೇ ಪ್ರತಿಫಲ ಬಯಸಕೂಡದು ಎಂದರು.

ತಾಲೂಕು ಕಸಾಪ ಅಧ್ಯಕ್ಷ ಕನ್ನಡ ಪುಟ್ಟಸ್ವಾಮಿ ಮಾತನಾಡಿ, ಜಗತ್ತು ಆಧುನೀಕರಣಗೊಂಡಂತೆ ಮನುಜ ಕ್ರೂರಿಯಾಗುತ್ತಿದ್ದಾನೆ. ಪ್ರಾಣಿಗಳ ವಾಸಸ್ಥಾನಕ್ಕೆ ಅಕ್ರಮ ಪ್ರವೇಶ ಮಾಡುತ್ತಿದ್ದಾನೆ. ಹಾಗಾಗಿ ಪ್ರಾಣಿಗಳು ನಗರದೊಳಗೆ ಪ್ರವೇಶಿಸುತ್ತಿವೆ. ಸ್ವಯಂ ಸೇವೆ ಮತ್ತು ಸಮಾಜ ಸೇವೆಯ ಮನಸ್ಥಿತಿ ಅಂತರ್ಯದಿಂದ ಸ್ಪುರಿಸಬೇಕು ಅನ್ಯರ ಬಲವಂತಕ್ಕೆ ಸೇವೆ ಮಾಡುವುದು ಸ್ವಯಂ ಸೇವೆ ಮತ್ತು ಸಮಾಜ ಸೇವೆ ಆಗುವುದಿಲ್ಲ ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ .ಸೀಗನಾಯಕ ಮಾತನಾಡಿ, ಗಾಂಧೀಜಿಯವರು ಸ್ವಯಂ ಸೇವೆಯ ಪ್ರವರ್ತಕರು. ಸಾಲುಮರದ ತಿಮ್ಮಕ್ಕ, ಮದರ್ ಥೆರೆಸ, ಡಾ.ಬಿ.ಆರ್.ಅಂಬೇಡ್ಕರ್ ರವರು ಕೂಡ ಈ ದೇಶದ ಮಹಾನ್ ಸ್ವಯಂ ಸೇವಕರು. ಅವರು ದೇಶಕ್ಕಾಗಿ ಅರ್ಪಣಾ ಮನೋಭಾವದಿಂದ ವಿವಿಧ ಕ್ಷೇತ್ರಗಳಲ್ಲಿ ಸ್ವಯಂ ಸೇವೆಯನ್ನು ಮಾಡಿದ್ದಾರೆ.ಹಾಗಾಗಿ ಅವರು ಹೆಸರುಗಳು ಇಂದಿಗೂ ಚಿರಸ್ಥಾಯಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಹಪ್ರಾಧ್ಯಾಪಕ ಡಾ.ನೀಲಕಂಠಸ್ವಾಮಿ ,ನನ್ನವ್ವ ಸಾಂಸ್ಕೃತಿಕ ಕಲಾತಂಡದ ವೈ.ಜಿ.ಮಹದೇವ, ಕಸಾಪದ ಚೌಹಳ್ಳಿ ಮಲ್ಲೇಶ್, ನಾಗೇಂದ್ರ, ಕೃಷ್ಣಮೂರ್ತಿ, ಹೆಳವರಹುಂಡಿ ಬಸಪ್ಪ ಮತ್ತಿತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು