News Karnataka Kannada
Sunday, April 28 2024
ಮೈಸೂರು

ದುಸ್ಥಿತಿಯಲ್ಲಿರುವ ಪುರ ಗ್ರಾಮದ ಪ್ರಯಾಣಿಕರ ತಂಗುದಾಣ

ಈಗಲೂ ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ಕಡೆ ಬಸ್ ಗಾಗಿ ಕಾಯುವ ಪ್ರಯಾಣಿಕರಿಗೆ ತಂಗುದಾಣಗಳೇ ಇಲ್ಲ. ಇದ್ದರೂ ಅವುಗಳು ದುಸ್ಥಿತಿಯಲ್ಲಿದ್ದು ಅದರೊಳಗೆ ಕುಳಿತು ಸ್ಥಿತಿಯಲ್ಲಿಲ್ಲ ಎನ್ನುವುದಕ್ಕೆ ತಾಲೂಕಿನ ಪುರ  ಗ್ರಾಮದಲ್ಲಿರುವ ತಂಗುದಾಣ ಸಾಕ್ಷಿಯಾಗಿದೆ.
Photo Credit : By Author

ಕೆ.ಆರ್.ಪೇಟೆ: ಈಗಲೂ ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ಕಡೆ ಬಸ್ ಗಾಗಿ ಕಾಯುವ ಪ್ರಯಾಣಿಕರಿಗೆ ತಂಗುದಾಣಗಳೇ ಇಲ್ಲ. ಇದ್ದರೂ ಅವುಗಳು ದುಸ್ಥಿತಿಯಲ್ಲಿದ್ದು ಅದರೊಳಗೆ ಕುಳಿತು ಸ್ಥಿತಿಯಲ್ಲಿಲ್ಲ ಎನ್ನುವುದಕ್ಕೆ ತಾಲೂಕಿನ ಪುರ  ಗ್ರಾಮದಲ್ಲಿರುವ ತಂಗುದಾಣ ಸಾಕ್ಷಿಯಾಗಿದೆ.

ಕೆ.ಆರ್.ಪೇಟೆ ತಾಲ್ಲೂಕಿನ ಚನ್ನರಾಯಪಟ್ಟಣ ರಸ್ತೆಯಲ್ಲಿ ಮೈಸೂರು ಮುಖ್ಯ ರಸ್ತೆಗೆ ಹೊಂದಿಕೊಂಡಂತಿರುವ ಪುರ  ಗ್ರಾಮದ ಪುರ ಗೇಟ್‌ನಲ್ಲಿರುವ ಪ್ರಯಾಣಿಕರ ತಂಗುದಾಣವು ದುಸ್ಥಿತಿಯಲ್ಲಿದ್ದು ಯಾವುದೇ ಸಮಯದಲ್ಲಿ ಕುಸಿದು ಬೀಳುವ ಸ್ಥಿತಿಯಲ್ಲಿದ್ದು, ಅಶುಚಿತ್ವದಿಂದ ಕೂಡಿದೆ. ಇದರೊಳಗೆ ಹೆಜ್ಜೆ ಹಾಕುವುದಿರಲಿ ಪಕ್ಕದಲ್ಲಿ ನಿಲ್ಲಲು ಭಯಪಡುವಂತಾಗಿದೆ.

ಇಂತಹ ದುಸ್ಥಿತಿಯಲ್ಲಿರುವ ಬಸ್ ತಂಗುದಾಣವನ್ನು ತೆರವುಗೊಳಿಸಿ  ಸುಸಜ್ಜಿತ  ಹೊಸ ತಂಗು ಧಾಣವನ್ನು ನಿರ್ಮಿಸುವಂತೆ ಗ್ರಾಮಸ್ಥರು ಆಗ್ರಹಿಸುತ್ತಾ ಬಂದಿದ್ದರೂ ಸಂಬಂಧಿಸಿದವರು ಮಾತ್ರ  ಇತ್ತ ಗಮನಹರಿಸುವಂತೆ ಕಾಣಿಸುತ್ತಿಲ್ಲ. ಆದರೂ ಈ ಕೂಡಲೇ ತೆರವುಗೊಳಿಸಿ ಹೊಸದಾಗಿ ಪ್ರಯಾಣಿಕರ ಬಸ್ ತಂಗುದಾಣ ನಿರ್ಮಿಸಿ ಸಹಾಯ ಮಾಡಬೇಕು.

ಅನಾಹುತವು ಸಂಭವಿಸುವ ಮುನ್ನ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಎಚ್ಚತ್ತುಕೊಂಡು ಶ್ರೀಸಾಮಾನ್ಯರಿಗೆ ಅನುಕೂಲ ಮಾಡಿಕೊಡುವಂತೆ ಹಿರಿಕಳಲೆ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವರಾಮೇಗೌಡ, ಮುಖಂಡ ರಾಜಾಹುಲಿರೇಣುಕಾ ಹಾಗೂ ಪುರ ಸುತ್ತಮುತ್ತಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು