ನಂಜನಗೂಡು: ತಾಲೂಕಿನ ಸುತ್ತೂರು ಮಠಕ್ಕೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಭೇಟಿ ನೀಡಿದರು. ನಾಳೆ ಮೈಸೂರಿನಲ್ಲಿ ದಸರಾ ಉದ್ಘಾಟನೆಗೆ ಆಗಮಿಸಿರುವ ಹಂಸಲೇಖ ಅವರು, ದಸರಾ ಉದ್ಘಾಟನೆ ಮುನ್ನ ಸುತ್ತೂರು ಮಠಕ್ಕೆ ಹಂಸಲೇಖ ಹಾಗೂ ಪತ್ನಿ ಲತಾ ಹಂಸಲೇಖ ಭೇಟಿ ನೀಡಿ, ಮಠದ ಗದ್ದುಗೆಗೆ ತೆರಳಿ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಆರ್ಶೀವಾದ ಪಡೆದಿದ್ದಾರೆ. ಕೆಲವು ಸಮಯ ಶ್ರೀಗಳ ಜೊತೆ ಹಂಸಲೇಖ ಮಾತುಕತೆ ನಡೆಸಿದ್ದಾರೆ.
ಶ್ರಿ ಮಠದ ವತಿಯಿಂದ ಹಂಸಲೇಖ ಅವರಿಗೆ ಮಂಗಳವಾದ್ಯದೊಂದಿಗೆ ಜೆಎಸ್ಎಸ್ ಕಾಲೇಜಿನ ವಿದ್ಯಾರ್ಥಿಗಳು ಅದ್ದೂರಿಯಾಗಿ ಸ್ವಾಗತ ಕೋರಲಾಯಿತು.