ಮೈಸೂರು: ಹಬ್ಬ ಹರಿದಿನಗಳಲ್ಲಿ ಉಡುಗೊರೆ ನೀಡುವುದು, ಸಿಹಿ ಹಂಚಿ ಬೇಧ- ಭಾವವಿಲ್ಲದೆ ಸಂಭ್ರಮಿಸುವುದು ಸನಾತನ ಸಂಪ್ರದಾಯದ ಭಾಗವಾಗಿದೆ ಎಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ ಹೇಮಂತ್ ಕುಮಾರ್ ಗೌಡ ಹೇಳಿದರು.
ಹೂಟಗಳ್ಳಿಯ ಹೌಸಿಂಗ್ ಬೋಡ್ ಕಾಲನಿಯ ಸರ್ಕಲ್ನಲ್ಲಿ ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕರ್ತರ ಜೊತೆಗೂಡಿ ಮಕರ ಸಂಕ್ರಾಂತಿ ಹಬ್ಬ ಅಂಗವಾಗಿ ಕ್ಷೇತ್ರದ ಪ್ರತಿ ಮನೆಮನೆಗೂ ಎಳ್ಳು ಬೆಲ್ಲ ಹಾಗೂ 10 ಸಾವಿರ ಕುಡಿಯುವ 20 ಲೀ. ನ ನೀರಿನ ಕ್ಯಾನ್ ಗಳನ್ನು ವಿತರಿಸಿ ಮಾತನಾಡಿ, ರಾಜಾ ಆಳ್ವಿಕೆಯ ಕಾಲದಿಂದ ನಾಡಿನಲ್ಲಿ ವಸ್ತ್ರ ಧವಸ ಧಾನ್ಯಗಳನ್ನು ಅರಸರು ದಾನವಾಗಿ ನೀಡುತ್ತಿದ್ದರು, ಆರ್ಥಿಕ ದುರ್ಬಲರಿಗೆ ಸಹಾಯ ಹಸ್ತ ಚಾಚುವ ಸಂಪ್ರದಾಯವನ್ನು ಮುಂದುವರಿಸಲಾಗಿದೆ ಹಾಗೂ ಪ್ರತಿಯೊಬ್ಬರಿಗೂ ಉತ್ತಮ ಗಾಳಿ ಉತ್ತಮ ನೀರು ಸಿಗುವ ಉದ್ದೇಶದಿಂದ ನಮ್ಮ ಕ್ಷೇತ್ರದ ಪ್ರತಿಯೊಂದು ಮನೆಗೂ ನೀರಿನ ಕ್ಯಾನ್ ಗಳನ್ನು ವಿತರಿಸಿದ್ದೇವೆ ಎಂದು ಹೇಳಿದರು.
ಇದೇ ವೇಳೆ ಗ್ರಾಮಾಂತರ ಅಧ್ಯಕ್ಷರಾದ ಮಂಗಳ ಸೋಮಶೇಖರ್, ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷರಾದ ಬಿ ಎಂ ರಘು, ಹಾಗೂ ಗೆಜ್ಜೆಗಳ್ಳಿ ಮಹೇಶ್, ಹಿರಿಯ ಬಿಜೆಪಿ ಕಾರ್ಯಕರ್ತರಾದ ಗೋಪಾಲ್ ರಾವ್, ವೇದರಾಜ್, ರಾಜಕುಮಾರ್, ಬೋಗಾದಿ ನಂದೀಶ್, ಚಾಮುಂಡೇಶ್ವರಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷ ಮಂಜುಳಾ, ಭಾರತಿ ಪಶುಪತಿ , ಗಂಗನಗೌಡ, ದೇವರಾಜು , ಹಾಗೂ ಇತರರು ಇದ್ದರು.