ಉಜಿರೆ: ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವದ ಧ್ವಜಾರೋಹಣ ಅನುವಂಶಿಕ ಆಡಳಿತ ಮೊಕ್ತೇಸರ ವಿಜಯರಾಘವ ಪಡುವೆಟ್ನಾಯರ ಮಾರ್ಗದರ್ಶನದಲ್ಲಿ ದಲ್ಲಿ, ಶರತ್ ಕೃಷ್ಣ ಪಡುವೆಟ್ನಾಯ ಜ.14 ರಾತ್ರಿ ನೆರವೇರಿಸಿದರು.
ಅರ್ಚಕರು, ವಿಲಯದವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಜ.15 ರಂದು ಬದಿ ಮೇಲೆ ಉಳ್ಳಾಲ್ತಿ, ಪೊಸಲ್ತಾಯಿ , ಕುಮಾರಸ್ವಾಮಿ ದೈವಗಳಿಗೆ ನೇಮ ಜರಗಿತು.
ಜ.16 ರಂದು ಸಂಜೆ ಬದಿಮೇಲೆ ನೆತ್ತರಮುಗುಳಿ ದೈವಗಳ ನೇಮ, ಜ.17 ರಂದು ರಾತ್ರಿ ಅಶ್ವತ್ಥಕಟ್ಟೆ ಉತ್ಸವ , ಜ. 18 ರಂದು ರಾತ್ರಿ ಪುಷ್ಕರಣಿ ಕಟ್ಟೆ ಉತ್ಸವ, ಜ.19ರಂದು ರಾತ್ರಿ ಪೇಟೆ ಸವಾರಿ, ಜ.20 ರಂದು ರಾತ್ರಿ ಚಂದ್ರಮಂಡಲ ರಥೋತ್ಸವ, ಜ. 21 ರಂದು ಬೆಳಿಗ್ಗೆ ದರ್ಶನ ಬಲಿ ಉತ್ಸವ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಮಹಾರಥೋತ್ಸವ ಹಾಗೂ ಶ್ರೀ ಭೂತ ಬಲಿ ಹಾಗೂ ಜ.22ರಂದು ಧ್ವಜಾವರೋಹಣ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ
ಶ್ರೀ ಶಾರದಾಮಂಟಪದಲ್ಲಿ ಜ 20ರಂದು ಸಂಜೆ 6.30 ರಿಂದ ನೃತ್ಯ ವೈಭವ, ದಾಸವಾಣಿ ಮತ್ತು ಸುಗಮ ಸಂಗೀತ, ನೃತ್ಯಾರ್ಪಣಂ, ಜ.21 ರಂದು ಸಂಜೆ 6.30.ರಿಂದ ಸಂಗೀತ ಸುಧೆ, ಭರತ ನಾಟ್ಯ ಯಕ್ಷಗಾನ ಪ್ರದರ್ಶನ ಜ. 22ರಂದು ಸಂಜೆ 7ರಿಂದ ಜಾನಪದ ಕಾರ್ಯಕ್ರಮ ನಡೆಯಲಿದೆ.