ಮೈಸೂರು: ಭವಿಷ್ಯವನ್ನು ಉತ್ತಮಪಡಿಸಿಕೊಳ್ಳಬೇಕೆಂಬ ದಾಹ ಇರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಡಿಸೆಂಬರ್ 10 ರ ಶನಿವಾರ ಸಂಜೆ ಇನ್ಫೋಸಿಸ್ ಆವರಣದಲ್ಲಿ ಆಯೋಜಿಸಿದ್ದ ಅನ್ಲೀಶ್ ಇಂಡಿಯಾ 2022 ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಸಂವಹನದಲ್ಲಿನ ಕ್ರಾಂತಿಯಿಂದಾಗಿ, ಸ್ಥಳೀಯವಾದದ್ದು ಜಾಗತಿಕವಾಗಿದೆ, ಮತ್ತು ಜಾಗತಿಕವಾದದ್ದು ಸ್ಥಳೀಯವಾಗಿದೆ. ವಿಶ್ವದ ಭವಿಷ್ಯದ ನಾಗರಿಕರು ಇವೆರಡರ ಭಾಗವಾಗಿ ಬದುಕಬೇಕು ಎಂದು ಅವರು ಹೇಳಿದರು.
“ನಮ್ಮ ವ್ಯಕ್ತಿತ್ವದ ಬೆಳವಣಿಗೆಗಾಗಿ ನಾವು ನಮ್ಮ ಹಸಿವನ್ನು ಉಳಿಸಿಕೊಳ್ಳಬೇಕು” ಎಂದು ಅವರು ಒತ್ತಿ ಹೇಳಿದರು.