ಮೈಸೂರು: ಪೌರ ಕಾರ್ಮಿಕರು ಕೆಲಸದಲ್ಲಿ ತೋರುವ ನಿಷ್ಠೆ ಪ್ರಾಮಾಣಿಕತೆಯಿಂದಲೇ ಮೈಸೂರು ನಗರ ಸ್ವಚ್ಛವಾಗಿದೆ ಎಂದು ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ಹೇಳಿದರು.
ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಶುಕ್ರವಾರ ಜಗನ್ಮೋಹನ ಅರಮನೆ ಆವರಣದಲ್ಲಿ ವಾರ್ಡಿನ ಹಿರಿಯ ಪೌರಕಾರ್ಮಿಕರಿಗೆ ಸನ್ಮಾನಿಸಿ ಆ ನಂತರ ಪೌರಕಾರ್ಮಿಕರೊಂದಿಗೆ ಕೇಕ್ ಕತ್ತರಿಸಿ ಅರ್ಥಪೂರ್ಣವಾಗಿ ಪೌರಕಾರ್ಮಿಕ ದಿನಾಚರಣೆ ಆಚರಿಸಿ ಮಾತನಾಡಿದರು.
ಪೌರ ಕಾರ್ಮಿಕರ ಮಕ್ಕಳು ಪೌರಕಾರ್ಮಿಕರಾಗಿ ಮುಂದುವರಿಯಬೇಕು ಎಂದು ಯಾರೂ ಬಯಸುವುದಿಲ್ಲ, ಅವರಿಗೆ ಉತ್ತಮ ಶಿಕ್ಷಣ ಕೊಡಿಸಿ ಒಳ್ಳೆಯ ಉದ್ಯೋಗ ವಂತರಾಗಲಿ, ಮನುಷ್ಯ ಹಣ ಅಂತಸ್ತು ಎಲ್ಲಕ್ಕಿಂತಲೂ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ ನಾಗರಿಕ ಆರೋಗ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರ ಶ್ರಮ ಶ್ಲಾಘನೀಯ. ದಿನನಿತ್ಯ ನಗರದಲ್ಲಿ ಕಸ ಸಂಗ್ರಹಣೆ ವಾಹನ ಎಲ್ಲ ವಾರ್ಡ್ ಗಳಿಗೂ ಬರುತ್ತದೆ ನಾಗರಿಕರು ಕಸ ನೀಡುವಾಗ ಹಸಿ ಕಸ ಒಣ ಕಸಗಳನ್ನು ಬೇರ್ಪಡಿಸಿ ನೀಡುವ ಮೂಲಕ ಪೌರ ಕಾರ್ಮಿಕರೊಂದಿಗೆ ಸಹಕರಿಸುವಂತೆ ಹೇಳಿದರು.
ಈ ಸಂದರ್ಭದಲ್ಲಿ ವಾರ್ಡಿನ ಹೆಲ್ತ್ ಇನ್ಸ್ ಪೆಕ್ಟರ್ ಮಂಜು ಕುಮಾರ್, ಸೂಪರ್ ವೈಸರ್ ನಂಜುಂಡ ಸ್ವಾಮಿ, ಪೌರಕಾರ್ಮಿಕರು, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಚರಣ್, ಕಾರ್ಯದರ್ಶಿಯವರಾದ ಶ್ರೀನಿವಾಸ್, ಬಿಜೆಪಿ ಮುಖಂಡರಾದ ರಾಜೇಂದ್ರ, ವಿಘ್ನೇಶ್ವರ ಭಟ್, ಸುದರ್ಶನ್, ಪ್ರಮೋದ್, ಸಚಿನ್, ಗೋಪಿ, ಸುರೇಂದ್ರ, ರವಿ, ಲಕ್ಷ್ಮಿ, ಮಂಜುನಾಥ್, ಆನಂದ್, ಪಾಪಣ್ಣ ,ಪದ್ಮಾ ಹಾಗೂ ವಾರ್ಡಿನ ಪೌರಕಾರ್ಮಿಕರು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.