ಮೈಸೂರು: 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಅಗ್ರಹಾರದ ಶಂಕರಮಠದಲ್ಲಿ ವಿಪ್ರ ಮಹಿಳಾ ಸಂಗಮ ವತಿಯಿಂದ ದೇಶಭಕ್ತಿ ಗಾಯನ ಸ್ಪರ್ಧೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ನಡೆಯಿತು.
ದೇಶಭಕ್ತಿ ಗಾಯನ ಸ್ಪರ್ಧೆಯಲ್ಲಿ 40ಕ್ಕೂ ಹೆಚ್ಚು ಮಹಿಳೆಯರು ಸ್ಪರ್ಧಿಸಿದ್ದು ವಿವಿಧ ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ
ಸಾಮೂಹಿಕ ವಿಭಾಗ ಸಾಮೂಹಿಕ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಪ್ರಥಮ ವಿಜೇತರಾದ ಅರುಂಧತಿ ತಂಡ ,ದ್ವಿತೀಯ ಬಹುಮಾನ ಪದ್ಮಿನಿ ವಲ್ಲಭ ತಂಡ,ತೃತೀಯ ಬಹುಮಾನ ಅನ್ನಪೂರ್ಣ ತಂಡಕ್ಕೆ ಬಹುಮಾನ ಪ್ರದಾನ ಮಾಡಲಾಯಿತು
ಪ್ರತ್ಯೇಕ ವಿಭಾಗದ ದೇಶಭಕ್ತಿ ಗೀತೆ ಸ್ಪರ್ಧೆ ಯಲ್ಲಿ ಮೊದಲನೇ ಬಹುಮಾನ ಹೇಮಲತಾ ಕುಮಾರಸ್ವಾಮಿ, ಎರಡನೇ ಬಹುಮಾನ ಪ್ರಭಾ ಬಿ ಎಸ್, ಮೂರನೇ ಬಹುಮಾನ ಸುಜಾತಾ ಕೆ, ನಾಲ್ಕನೇ ಬಹುಮಾನ ವನಮಾಲಾ ಅವರಿಗೆ ಬಹುಮಾನ ನೀಡಲಾಯಿತು
ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ರಾಜ್ಯ ನಿರ್ದೇಶಕ ಕ್ಯಾಪ್ಟನ್ ಸಿ ವಿ ಗೋಪಿನಾಥ್, ರಾಷ್ಟ್ರಪತಿ ವಿಜೇತರು ಹಾಗೂ ಸುಧರ್ಮ ಪತ್ರಿಕೆಯ ಮುಖ್ಯಸ್ಥರಾದ ಜಯಲಕ್ಷ್ಮಿ, ವಿಪ್ರ ಮಹಿಳಾ ಸಂಘದ ಅಧ್ಯಕ್ಷರಾದ ಡಾ. ಕೆ ವಿ ಲಕ್ಷ್ಮಿದೇವಿ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ಜಿಎಸ್ ಎಸ್ ಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವನಜಾ ಪಂಡಿತ್, ಪದ್ಮಶ್ರೀ ಶಂಕರ್ ಮಠದ ಕಾರ್ಯದರ್ಶಿ ಶೇಷಾದ್ರಿ, ಪರಮಪೂಜ್ಯ ಇಳೆಯಾಳ್ವಾರ್ ಸ್ವಾಮೀಜಿ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ರಾಜ್ಯ ನಿರ್ದೇಶಕ ಸಿ.ವಿ.ಗೋಪಿನಾಥ್, ನಂ ಶ್ರೀಕಾಂತ್ ಕುಮಾರ್, ನಂ ಶ್ರೀಕಾಂತ್ ಕುಮಾರ್, ಮಾಜಿ ನಗರ ಪಾಲಿಕೆ ಸದಸ್ಯರಾದ ಸೌಭಾಗ್ಯ ಮೂರ್ತಿ, ಲತಾ ಮೋಹನ್ ,ಹೇಮಲತಾ ,ವೀಣಾ ಡೋಂಗ್ರೆ, ಸಹನಾ, ಜಯಶ್ರೀ ಇನ್ನಿತರರು ಹಾಜರಿದ್ದರು