News Karnataka Kannada
Friday, May 03 2024
ಮೈಸೂರು

ಮೈಸೂರು: ಲೀಲಾವತಿ, ವಸುಂಧರ ದೊರೆಸ್ವಾಮಿಗೆ ಪ್ರಶಸ್ತಿ

Leelavathi
Photo Credit : By Author

ಮೈಸೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸಂಗೀತ, ನಾಟಕ ಅಕಾಡೆಮಿ ಮೈಸೂರಿನ ಇಬ್ಬರು ಸೇರಿದಂತೆ ಕರ್ನಾಟಕದ ಐವರಿಗೆ ಸಂಗೀತ ನಾಟಕ ಅಕಾಡೆಮಿ ಅಮೃತ ಪ್ರಶಸ್ತಿ ಘೋಷಿಸಿದೆ.

ಸುಗಮ ಸಂಗೀತದ ಹಿರಿಯ ಗಾಯಕಿ ಎಚ್.ಆರ್.ಲೀಲಾವತಿ ಹಾಗೂ ಭರತನಾಟ್ಯ ಕಲಾವಿದೆ ವಸುಂಧರ ದೊರೆಸ್ವಾಮಿ ಅವರಿಗೆ ಪ್ರಶಸ್ತಿ ನೀಡಲಾಗಿದೆ. ಈ ಕುರಿತು ಸಂತಸ ಹಂಚಿಕೊಂಡಿರುವ ಎಚ್.ಆರ್.ಲೀಲಾವತಿ, ಕಲಾವಿದರು ತಮ್ಮ ಸಾಧನೆಯ ಹಾದಿ ತುಳಿದು ಮುನ್ನಡೆಯಬೇಕು. ನಾನೆಂದೂ ಪ್ರಶಸ್ತಿಯ ಹಿಂದೆ ಬಿದ್ದವಳಲ್ಲ. ಜನರ ಪ್ರೀತಿ ಮತ್ತು ಮೆಚ್ಚುಗೆಯೇ ನನಗೆ ಪ್ರಶಸ್ತಿ. ತಡವಾದರೂ ನನ್ನ ಸಾಧನೆ ಗುರುತಿಸಿ ರಾಷ್ಟ್ರಮಟ್ಟದ ಪ್ರಶಸ್ತಿ ದೊರೆತಿರುವುದು ಖುಷಿ ನೀಡಿದೆ. ಕಲಾವಿದರ ಸಾಧನೆ ಮತ್ತು ಸಾಮರ್ಥ್ಯ, ಯೋಗ್ಯತೆಯ ಮೂಲಕ ವಯಸ್ಸಿರುವಾಗಲೇ ಗುರುತಿಸಿ ಪ್ರಶಸ್ತಿಗಳನ್ನು ಕೊಡ ಮಾಡಿದರೆ ಸಾಧಕರಿಗೆ ಹೆಚ್ಚು ಸಂಭ್ರಮವಿರಲಿದೆ ಎಂದರು.

ಡಾ.ವಸುಂಧರ ದೊರೆಸ್ವಾಮಿ ಮಾತನಾಡಿ, ತಡವಾಗಿಯಾದರು ಮೈಸೂರಿಗರಿಗೆ ಪ್ರಶಸ್ತಿ ದೊರೆತಿರುವುದು ಬಹಳ ಸಂತೋಷವಾಗಿದೆ. ಇದು ನನ್ನೊಬ್ಬಳಿಗೆ ಬಂದ ಪ್ರಶಸ್ತಿ ಅಲ್ಲ. ಮೈಸೂರಿಗೆ ಸಂದ ಗೌರವ. ಇದುವರೆಗೂ ಮೈಸೂರಿನ ಯಾರೊಬ್ಬರಿಗೂ ಈ ಪ್ರಶಸ್ತಿ ಲಭಿಸಿಲ್ಲ. ಹಲವಾರು ವರ್ಷಗಳಿಂದ ಕಲೆಯಲ್ಲಿ ಸೇವೆ ಸಲ್ಲಿಸಿದ ಕಾರಣ ತಡವಾಗಿಯಾದರೂ ಪ್ರಶಸ್ತಿ ದೊರೆತಿದೆ. ಮೈಸೂರಿನಲ್ಲಿ ನನ್ನಂತ ಕಲಾವಿದರು ಅನೇಕ ಮಂದಿ ಕಲೆಗಾಗಿ ತಮ್ಮ ಜೀವನ ಮುಡಿಪಿಟ್ಟು, ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಿದ್ದು, ಅಂತಹವರನ್ನು ಸರ್ಕಾರ ಗುರುತಿಸಿ ಪ್ರಶಸ್ತಿ ನೀಡಬೇಕು ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು