News Karnataka Kannada
Saturday, May 04 2024
ಮೈಸೂರು

ಮೈಸೂರು: ಶ್ರೀ ಚಿಕ್ಕದೇವಮ್ಮನವರ ತಾಳು ಬೆಟ್ಟದ ಪಾದದ ಮೆಟ್ಟಿಲು ಉದ್ಘಾಟನೆ

Mysuru: Inauguration of the steps of the foot of Sri Chikkadevamma's Taalu Hill
Photo Credit : By Author

ಮೈಸೂರು: ಸರಗೂರು ತಾಲ್ಲೂಕಿನ ಶ್ರೀ ಚಿಕ್ಕದೇವಮ್ಮನವರ ತಾಳು ಬೆಟ್ಟದ ಪಾದದ ಹತ್ತಿರದ ಮುಖ್ಯ ದ್ವಾರದಲ್ಲಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ 4 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ ಮೆಟ್ಟಿಲು ಮತ್ತು ತಡೆಗೋಡೆಯನ್ನು ಶಾಸಕ ಅನಿಲ್ ಚಿಕ್ಕಮಾದು ಉದ್ಘಾಟಿಸಿದರಲ್ಲದೆ, ಮೆಟ್ಟಿಲ ಮೂಲಕ ಜನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಇನ್ನುಳಿದ ಮೆಟ್ಟಲುಗಳ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ವತಿಯಿಂದ 1 ಕೋಟಿ 75 ಲಕ್ಷ ಹಾಗೂ ದೇವಸ್ಥಾನಕ್ಕೆ ಹೋಗುವ ರಸ್ತೆಗೆ 1 ಕೋಟಿ ಮಂಜೂರಾಗಿದ್ದು, ಒಟ್ಟಾರೆ 2 ಕೋಟಿ 75 ಲಕ್ಷದ ಕಾಮಗಾರಿಗೆ ಇದೇ ವೇಳೆ ಶಾಸಕ ಅನಿಲ್ ಚಿಕ್ಕಮಾದು ಚಾಲನೆ ನೀಡಿದ್ದಾರೆ.

ಇದೇ ವೇಳೆ ಶಾಸಕ ಅನಿಲ್ ಚಿಕ್ಕಮಾದು ಅವರು ತಮ್ಮ 34 ನೇ ಹುಟ್ಟು ಹಬ್ಬವನ್ನು ತಾಲ್ಲೂಕಿನ ನಾಡದೇವತೆ ಚಿಕ್ಕದೇವಮ್ಮನ ಸನ್ನಿಧಾನಕ್ಕೆ ತೆರಳಿ ಧರ್ಮಪತ್ನಿ ಸೌಮ್ಯ, ತಾಯಿ ನಾಗಮ್ಮ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾಜಿ ಜಿ ಪಂ. ಸದಸ್ಯ ಹಾಗೂ ಶ್ರೀ ವಾಲ್ಮೀಕಿ ಮಹರ್ಷಿ ಸಹಕಾರ ಸಂಘದ ಅಧ್ಯಕ್ಷ ಕೆ ಚಿಕ್ಕವೀರನಾಯಕ ಮಾತನಾಡಿ, ಅನಿಲ್ ಚಿಕ್ಕಮಾದು ಅವರು ಉತ್ಸಾಹದಿಂದ ಕೆಲಸ ಮಾಡುವುದರ ಜೊತೆಗೆ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಇಂದಿನ ಯುವ ಕಾರ್ಯಕರ್ತರಿಗೆ ಅವರು ಮಾದರಿಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿಗಳು ಅವರ ಅವಧಿಯಲ್ಲಿ ನಡೆಯುವಂತಾಗಲಿ ಎಂದರು.

ಮಾಜಿ ನಾಯಕ ಸಮಾಜದ ಅಧ್ಯಕ್ಷ ಶಂಭುಲಿಂಗ ನಾಯಕ ಮಾತನಾಡಿ, ರಾಜಕೀಯದಲ್ಲಿ ವಿರೋಧ ಪಕ್ಷ ದವರಿಗೂ ಗೌರವ ನೀಡುವ ವ್ಯಕ್ತಿತ್ವ ಅನಿಲ್ ಚಿಕ್ಕಮಾದು ಅವರದ್ದಾಗಿದೆ. ಶಾಸಕರಾಗಿ, ಹಲವಾರು ಕೆಲಸ ಕಾರ್ಯಗಳನ್ನು ಹೆಚ್ಚಿನ ರೀತಿಯಲ್ಲಿ ಮಾಡಿದ್ದಾರೆ, ಇವರಿಂದ ದೀನ ದಲಿತರು, ಬಡವರು, ಕೂಲಿಕಾರ್ಮಿಕರು ಸೇರಿದಂತೆ ಪಟ್ಟಣದ ಸಮಗ್ರ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು