ಚಿಕ್ಕಮಗಳೂರು: ಸಂಸ್ಕಾರ ಪಡೆದ ವ್ಯಕ್ತಿ ಭಗವಂತನಾಗುವ ಅವಕಾಶ ಭಾರತ ಹೊರತು ಪಡಿಸಿ ಜಗತ್ತಿನ ಯಾವ ದೇಶದಲ್ಲಿಯೂ ಇಲ್ಲ ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ.
ನಗರದ ಶ್ರೀ ಬಸವತತ್ವ ಪೀಠ (ರಿ) ಶ್ರೀ ಬಸವ ಮಂದಿರ ಆವರಣದಲ್ಲಿ ಭಾನುವಾರ ಮೂರು ಕೋಟಿ ರೂ. ವೆಚ್ಚದ ನೂತನ ಮಠ ರ್ಮಾಣಕ್ಕೆ ಶಿಲಾನ್ಯಾಸ ನೇರವೇರಿಸಿ ಮಾತನಾಡಿದರು.ರಿಗೆ ಸಂಸ್ಕಾರ ಕೊಟ್ಟರೆ ರು ತೀರ್ಥ ಆಗುತ್ತೆ. ಮನುಷ್ಯಗೆ ಸಂಸ್ಕಾರ ಕೊಟ್ಟರೆ ಮನುಷ್ಯ ಭಗವಂತನೇ ಅಗುತ್ತಾನೆ. ಜಗತ್ತಿನಲ್ಲಿ ನರಹರನಾಗುವ ಅವಕಾಶ ಬೇರೆಲ್ಲೂ ಇಲ್ಲ. ಭಾರತದಲ್ಲಿ ನರ ಹರನಾಗುವ ಅವಕಾಶವಿದೆ ಎಂದರು.
ವ್ಯಕ್ತಿಗೆ ಸಂಸ್ಕಾರ ಡುವ ಮಠಗಳು, ಸಮಾಜ ರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಭಗವಂತನ ಸಂಕಲ್ಪದಿಂದ ಮಾತ್ರ ಎಲ್ಲ ಕಾರ್ಯಗಳು ನಡೆಯುತ್ತವೆ ಎಂಬುದು ಭಾರತೀಯರ ನಂಬಿಕೆ. ಭಗವಂತನ ಹಾಗೂ ಭಕ್ತರ ಸಂಕಲ್ಪದಿಂದ ಬಸವ ಮಂದಿರ ಮಠ ಪುನರ್ ರ್ಮಾಣವಾಗುತ್ತಿದೆ ಎಂದರು.
ಸಾಮೂಹಿಕ ಪ್ರಯತ್ನದಿಂದ ಮಾತ್ರ ದೊಡ್ಡ ಕೆಲಸಗಳು ಕೈಗೂಡುತ್ತವೆ. ಬಸವ ತತ್ವ ಪೀಠವು ಕೇವಲ ಸರ್ಕಾರಿ ಕಟ್ಟಡ ಆಗದೆ, ಭಕ್ತರ ಸಹಕಾರದಿಂದ ಭವ್ಯ ಮಂದಿರವಾಗಿ ರ್ಮಾಣವಾಗಲಿ ಎಂದರು.
ಮಠಗಳು ಸಂಸ್ಕಾರ ನೀಡುವ ಪ್ರಧಾನ ಕೇಂದ್ರಗಳಾಗಿದ್ದು, ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿವೆ. ಮಠಗಳ ಜೊತೆ ಭಕ್ತರ ಭಾವನೆಗಳೂ ಒಂದಾದಗ ಮಾತ್ರ ಶ್ರೇಷ್ಠ ಶ್ರದ್ಧಾ ಕೇಂದ್ರ ರೂಪಿಸಲು ಸಾಧ್ಯ.
ಕಾರ್ಯಕ್ರಮದ ಸಾಧ್ಯವ ವಹಿಸಿದ್ದ ಬಸವ ತತ್ವ ಪೀಠದ ಶ್ರೀ ಡಾ. ಬಸವ ಮರಳಸಿದ್ದ ಸ್ವಾಮೀಜಿ ಆಶೀರ್ವಚನ ಡಿ, ಮಠ ಭಕ್ತರಿಗೆ ಹೊರತು ಸ್ವಾಮೀಜಿಗಳದಲ್ಲ. ಮಠ ಶ್ರದ್ಧಾ ಕೇಂದ್ರ. ಇಲ್ಲಿ ಸಂಸ್ಕಾರದ ಜೊತೆ ಜೀವನದ ನೈತಿಕ ಬೋಧನೆ ಸಹ ಮಾಡಲಾಗುತ್ತದೆ. ಧರ್ಮ ಸಂಸ್ಕಾರ ಉಳಿಸಿ ಬೆಳೆಸುವ ಕರ್ತವ್ಯ ಸ್ವಾಮೀಜಿಗಳದ್ದಾಗಿದೆ ಎಂದರು.
ಭಕ್ತರಿಗೆ ಶಾಂತಿ ನೀಡುವ ತಾವಣವಾಗಿ ಮಠ ರ್ಮಾಣವಾಗಬೇಕಿದೆ. ಸ್ವಾಮೀಜಿಗಳ ಅನುಕೂಲಕ್ಕೆ ಮಠ ಅಲ್ಲ. ಭಕ್ತರ ಒಳಿತಿಗಾಗಿ ಮಠ ಇಲ್ಲಿ ಕಟ್ಟಲಾಗುತ್ತದೆ. ಸರ್ಕಾರ ಮೂರು ಕೋಟಿ ರೂ. ಡಿದ್ದು, ಭಕ್ತರು ಸಹಾಯದ ಮೂಲಕ ಉತ್ತಮ ಮಠ ರ್ಮಸಲು ಯೋಚಿಸಲಾಗಿದೆ ಎಂದರು.
ಮಠಗಳು ಭಕ್ತರಿಗಾಗಿಯೇ ಹೊರತು ಸ್ವಾಮೀಜಿಗಳಿಗೆ ರ್ಮಾಣವಾಗಬಾರದು. ಮಠಕ್ಕೆ ಬರುವ ವ್ಯಕ್ತಿಗೆ ಶಾಂತಿ-ಸಮಾಧಾನ ಲಭ್ಯವಾಗುವಂತೆ ಬಸವ ಮಂದಿರ ಮಠ ರೂಪಿಸಲಾಗುವುದು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡ ಮಾತನಾಡಿ, ಶಿಕ್ಷಣ ಕಲಿತವನು ಭ್ರಷ್ಟಾಚಾರಿ ಆಗಬಹುದೇನು. ಆದರೆ, ಸಂಸ್ಕಾರ ಕಲಿತವನು ಭ್ರಷ್ಟಾಚಾರಿಯಾಗದೆ ನೈತಿಕ ನೆಲೆಯಲ್ಲಿ ಜೀವನ ರೂಪಿಸಿಕೊಳ್ಳುತ್ತಾನೆ ಎಂದು ಹೇಳಿದರು.ಸೂರ್ಯನ ಕಿರಣಗಳು ಎಲ್ಲ ಜೀವಿಗಳಿಗೂ ಬೆಳಕು ನೀಡುವಂತೆ, ದಾರ್ಶಕರ ಮಾತುಗಳು ಎಲ್ಲರನ್ನು ತಲುಪಬೇಕು ಎಂದರು.
ಕಟ್ಟಡ ಸಮಿತಿ ಅಧ್ಯಕ್ಷ ಎಚ್.ಡಿ. ತಮ್ಮಯ್ಯ ಮಾತನಾಡಿ, ಸುಸಜ್ಜಿತ ಮಠ ರ್ಮಿಸಲು ಭಕ್ತರು ಸಂಕಲ್ಪ ಮಾಡಿದ್ದಾರೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲ್ಮುರಡಪ್ಪ, ಮುಖಂಡರಾದ ಬಿ.ಎಚ್. ಹರೀಶ್, ನಗರಸಭೆ ಸದಸ್ಯರಾದ ಕವಿತಾಶೇಖರ್, ಮಧುಕುಮಾರ್ ರಾಜ್ ಅರಸ್, ಅರುಣ್ಕುಮಾರ್, ಡಿಸಿಸಿ ಬ್ಯಾಂಕ್ ರ್ದೇಶಕರಾದ ಮುಗುಳುವಳ್ಳಿ ರಂಜನ್, ಬಸವರಾಜಪ್ಪ, ಸ್ವಾಗತ ಸಮಿತಿ ಅಧ್ಯಕ್ಷ ಮಲ್ಲೇಶ್, ಟ್ರಸ್ಟಿ ಮಲ್ಲೇಗೌಡ, ವೀರಶೈವ ಮುಖಂಡ ಉಪಸ್ಥಿತರಿದ್ದರು, ಪರಮೇಶ್ವರಪ್ಪ ಸ್ವಾಗತಿಸಿ ವಂದಿಸಿದರು.