ಮೈಸೂರು: ಬಹುಕೋಟಿ ವೆಚ್ಚದ ಮೈಸೂರು ಬೆಂಗಳೂರು ನೂತನ ಹೆದ್ದಾರಿ ಯೋಜನೆ ರಾಜಕೀಯ ಲಾಭ ಪಡೆಯಲು ರಾಜಕೀಯ ಪಕ್ಷಗಳು ಸ್ಪರ್ಧೆಗೆ ಬಿದ್ದಂತೆ ವರ್ತಿಸುತ್ತಿದ್ದು, ಮೂರು ಪಕ್ಷಗಳ ನಾಯಕರ ನಡುವೆ ಆಗಾಗ್ಗೆ ಜಟಾಪಟಿ ಸಮಾನ್ಯವಾಗಿದೆ. ಈ ನಡುವೆ ಯೋಜನೆ ಕುರಿತು ಮಾಜಿ ಲೋಕೋಪಯೋಗಿ ಸಚಿವ ಮಹದೇವಪ್ಪ ಟ್ವೀಟ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಸ್ಕರ್ ಫರ್ನಾಂಡಿಸ್, ಮಾಜಿ ಸಿಎಂ ಸಿದ್ದರಾಮಯ್ಯ, ಮತ್ತು ನಾನು ( ಎಚ್.ಸಿ ಮಹದೇವಪ್ಪ) ರಸ್ತೆ ನಿರ್ಮಾಣಕ್ಕೆ ಕಾರಣಿಕರ್ತರು. ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಂಡ ವೇಳೆ ಪ್ರತಾಪ್ ಸಿಂಹ ಎಂಪಿ ಆಗಿಯೇ ಆಯ್ಕೆ ಆಗಿರಲಿಲ್ಲ ಎಂದು ತಿಳಿಸಿದ್ದಾರೆ.
ಈ ಸಂಬಂಧ ಮರುಟ್ವೀಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ, ಈ ಯೋಜನೆಯನ್ನು ಪ್ರಧಾನಿ 2018 ಫೆ.19ರಂದು ಘೋಷಿಸಿದ್ದು, ಮಹಾರಾಜ ಗ್ರೌಂಡ್ನಲ್ಲಿ ಸಿಸಿಇಎ ಮಂಜೂರಾತಿ ಕೊಟ್ಟಿದ್ದು, ಫೆ.13 ಮತ್ತು 20 ರಂದು ನಾನು ಎಂಪಿ ಆಗಿದ್ದು ಮೇ 2014ರಲ್ಲಿ ಎಂದು ದಾಖಲೆ ಸಮೇತ ಟ್ವೀಟ್ ಮಾಡಿರುವುದು ಜಾಲತಾಣದಲ್ಲಿ ವೈರಲ್ ಆಗಿದೆ.