News Karnataka Kannada
Thursday, May 02 2024
ಮೈಸೂರು

ಮೈಸೂರು: ಎಸ್ ಡಿ ಎಮ್ ಐ ಎಮ್ ಡಿ ಸಂಸ್ಥೆಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆ

Mysore
Photo Credit : News Kannada

ಮೈಸೂರು: ನಾಯಕರುಗಳಿಗೆ ಗೌರವ ಸಲ್ಲಿಸುವುದರ ಜೊತೆಗೆ ಯುವ ನಿರ್ವಹಣಾಕಾರರಿಗೆ ಬದಲಾವಣೆಯ ಹರಿಕಾರರಾಗಬೇಕೆಂದು ಕಿವಿಮಾತು ಹೇಳುತ್ತ ಮೈಸೂರಿನ ಎಸ್ ಡಿ ಎಮ್ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ (SDMIMD) ಸಂಸ್ಥೆಯವರು ಸ್ವತಂತ್ರ ದಿನಾಚರಣೆಯ ಅಮೃತ ಮಹೋತ್ಸವವನ್ನು ಆಚರಿಸಿದರು.

ಡಾ. ರಿಯಾಜ್ ಅಹ್ಮದ್ ಕೆ., ಅಧ್ಯಾಪಕರು, ಎಸ್ ಡಿ ಎಮ್ ಐ ಎಮ್ ಡಿ – ಇವರು ಮುಖ್ಯ ಅತಿಥಿಗಳಾಗಿ, ತ್ರಿವರ್ಣ ಧ್ವಜವನ್ನು ಹಾರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ರಿಯಾಜ್ ಅವರು ಸ್ವಾತಂತ್ರ್ಯದ ವಿವಿಧ ಹಂತಗಳನ್ನು ನೆನಪಿಸಿಕೊಂಡು, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ  ಮೂರು ಮಟ್ಟಗಳ ನಾಯಕರುಗಳಿಗೆ ವಂದಿಸಬೇಕು. ಪ್ರಾದೇಶಿಕ ಮತ್ತು ರಾಷ್ಟ್ರಮಟ್ಟದ ಅನೇಕ ನಾಯಕರುಗಳ ಅಜ್ಞಾತ ತ್ಯಾಗಗಳು ಚರಿತ್ರೆಯಲ್ಲಿ ದಾಖಲಾಗಿಲ್ಲ. ಉದಾಹರಣೆಗೆ, ಶ್ರೀ ರಾಮಚಂದ್ರ ರಾವ್, ಮೈಸೂರಿನ ಹಿರಿಯ ಮಹಾತ್ಮರಂತೆಯೇ ಎಲ್ಲಾ ರಾಜ್ಯಗಳ ಹಾಗೂ ಜನಾಂಗೀಯ ನಾಯಕರುಗಳು ರಾಷ್ಟ್ರಮಟ್ಟದ ನಾಯಕರಂತೆಯೇ ಬಲಿದಾನ ನೀಡಿದ್ದಾರೆ. ಸಂಕಲ್ಪ ಮತ್ತು ದೇಶಕ್ಕಾಗಿ ಬದ್ಧರಾಗಿರುವವರಿಗೆ ಆದರ್ಶ ಪ್ರಾಯರಾದ ಭಗತ್ ಸಿಂಗ್ ರಾಷ್ಟ್ರದ ನಾಯಕರು. ಜನಾಂಗೀಯ ಗುಂಪು, ಭಾಷೆ, ಧರ್ಮ, ಜಾತಿ ಹಾಗೂ ಇತರ ಅಂತರಗಳನ್ನು ಮೀರಿ ಎಲ್ಲಾ ನಾಯಕರು ದೇಶದ ಸ್ವಾತಂತ್ರ್ಯಕ್ಕಾಗಿ ಸಮನಾಗಿ ತಮ್ಮ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ತಮ್ಮ ಮಾತುಗಳನ್ನು ಮುಂದುವರೆಸಿದ ಅವರು, ಯುವ ನಿರ್ವಹಣಾಕಾರು ಬದಲಾವಣೆಯ ಹರಿಕಾರರಾಗಬೇಕೆಂಬ ಕಿವಿಮಾತನ್ನು ಹೇಳಿದರು.

ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕು. ಡಾ. ಎ ಪಿ ಜಿ ಅಬ್ದುಲ್ ಕಲಾಂ ಅವರು ಹೇಳಿದಂತೆ, ಸತ್ಯವಾದ ಆಚಾರ ನಮ್ಮ ಹೃದಯದಲ್ಲಿ ಇದ್ದರೆ, ನಮ್ಮ ನಡವಳಿಕೆಯಲ್ಲಿ ಸೌಂದರ್ಯ, ಮನೆಯಲ್ಲಿ ಸಾಮರಸ್ಯ ಇರುತ್ತದೆ. ಇದರಿಂದ ದೇಶಕ್ಕೆ ಸುವ್ಯವಸ್ಥೆ ಹಾಗೂ ವಿಶ್ವಕ್ಕೆ ಶಾಂತಿ ದೊರೆಯುತ್ತದೆ. ಕ್ರೀಡೆಯಲ್ಲಿ ಗೆದ್ದವರಿಗೆ ಪ್ರಮಾಣಪತ್ರ ವಿತರಣೆ, ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಯ ಗಾಯನ ಹಾಗೂ ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳಿಂದ ಅಭಿಪ್ರಾಯ, ಆಲೋಚನೆಗಳ ಹಂಚಿಕೆ – ಇವೆಲ್ಲವೂ ಕಾರ್ಯಕ್ರಮದ ಪ್ರಮುಖ ಅಂಶಗಳಾಗಿದ್ದವು.

ನಿರ್ದೇಶಕರಾದ ಡಾ. ಎನ್. ಆರ್. ಪರಶುರಾಮನ್, ಉಪನಿರ್ದೇಶಕರಾದ ಡಾ. ಎಸ್. ಎನ್. ಪ್ರಸಾದ್, ಅಧ್ಯಾಪಕ ವೃಂದ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಈ ಆಚರಣೆಯಲ್ಲಿ ಪಾಲ್ಗೊಂಡರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು