News Karnataka Kannada
Monday, April 29 2024
ಸಾಂಡಲ್ ವುಡ್

ಮೈಸೂರು: ಅ.30ರಂದು ಗಂಧದಗುಡಿ ಚಿತ್ರಕಲಾ ಸ್ಪರ್ಧೆ

Mysore/Mysuru: Gandhadagudi Painting Competition to be held on Oct.30
Photo Credit : By Author

ಮೈಸೂರು: ಪುನೀತ್ ರಾಜಕುಮಾರ್ ರವರ ನೆನಪಿನಲ್ಲಿ ಮಕ್ಕಳಲ್ಲಿ ಪರಿಸರ ಕಾಳಜಿ, ವನ್ಯಜೀವಿಗಳ ಅರಣ್ಯ ಪ್ರದೇಶಗಳ ಅರಿವು ಮೂಡಿಸುವಲ್ಲಿ ಆಯೋಜಿಸಿರುವ ಗಂಧದಗುಡಿ ಚಿತ್ರಕಲಾ ಸ್ಪರ್ಧೆ ಯಲ್ಲಿ ಪ್ರತಿ ಶಾಲೆಯ ಮಕ್ಕಳು ಭಾಗವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.

ಕರ್ನಾಟಕ ರತ್ನ ಅಪ್ಪು ಅಭಿಮಾನಿಗಳ ಬಳಗದ ವತಿಯಿಂದ ಕನ್ನಡಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಮೊದಲನೇ ವರ್ಷದ ನೆನಪಿನಲ್ಲಿ ಅ.30ರಂದು ಹಮ್ಮಿಕೊಂಡಿರುವ ಗಂಧಧಗುಡಿ ಚಿತ್ರಕಲಾ ಸ್ಪರ್ಧೆ ಕುರಿತ ಭಿತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿ, ಕನ್ನಡ ಚಿತ್ರರಂಗದ ನಟಸಾರ್ವಭೌಮ ವರನಟ ಡಾ.ರಾಜಕುಮಾರ್ ರವರ ಪ್ರತಿಯೊಂದು ಚಿತ್ರವೂ ಸಮಾಜಕ್ಕೆ ಸಂದೇಶ ನೀಡುತ್ತಿದ್ದವು, ಕುಟುಂಬ ಪ್ರಧಾನವಾದ ಚಿತ್ರಗಳಾಗಿದ್ದವು. ಅವರಂತಯೇ ಅವರ ಸುಪುತ್ರ ಪವರ್ ಸ್ಟಾರ್ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ರವರ ನಟನೆಯ ಚಿತ್ರಗಳು ಸಹ ಸಮಾಜ ಜಾಗೃತಿ ಮೂಡಿಸುತ್ತಿದ್ದವು ಮದ್ಯವ್ಯಸನ ಮುಕ್ತ ಸಮಾಜ, ಪರಿಸರ ಸಂರಕ್ಷಣೆ ಕಾಳಜಿ, ಸರಳತೆಯ ನಟ ಪುನೀತ್ ರವರು ಚಿಕ್ಕವಯಸ್ಸಿನಲ್ಲಿಯೇ ನಟಿಸಿ ರಾಷ್ಟ್ರೀಯ ಪ್ರಶಸ್ತಿಗಳನ್ನ ಪಡೆದುಕೊಂಡವರು.

ವಿದ್ಯಾರ್ಥಿಯ ಪಾತ್ರದಿಂದ ಜಿಲ್ಲಾಧಿಕಾರಿ ಪಾತ್ರ, ಸೈನಿಕ ಪಾತ್ರ, ಆರಕ್ಷಕ ಅಧಿಕಾರಿ ಪಾತ್ರ, ಅಷ್ಟೆ ಅಲ್ಲದೇ ಇಂದಿನ ಗಂಧದಗುಡಿ ಚಿತ್ರದಲ್ಲಿ ಅರಣ್ಯಸಂರಕ್ಷಣೆ ಪರಿಸರ ಕಾಳಜಿಯನ್ನ ಯುವಪೀಳಿಗೆಗೆ ಮೂಡಿಸುವಲ್ಲಿ ಮತ್ತು ವನ್ಯಜೀವಿಗಳ ಪರಿಚಯದ ಬಗ್ಗೆ ಅವರು ಬೆಟ್ಟಗುಡ್ಡ ಅರಣ್ಯ ಜಾಗದಲ್ಲಿ ನಟಿಸಿದ್ದು ಮಹತ್ವವಾಗಿದೆ ಎಂದು ಹೇಳಿದರು.

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಮಿರ್ಲೆ ಶ್ರೀನಿವಾಸ ಗೌಡ ರವರು ಮಾತನಾಡಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ನೆನಪಿನಲ್ಲಿ ಆಯೋಜಿಸಿರುವ ಗಂಧದಗುಡಿ ಚಿತ್ರಕಲಾ ಸ್ಪರ್ಧೆಗೆ ಮೈಸೂರು ಜಿಲ್ಲೆಯ ಎಲ್ಲಾ ಶಿಕ್ಷಣ ಮಂಡಳಿಯವರು ತಮ್ಮ ಮಕ್ಕಳನ್ನು ಕಳುಹಿಸಬಹುದು ಪ್ರವೇಶ ಉಚಿತವಾಗಿದೆ, ವಿವಿಧ ವಯೋಮಿತಿಯ ಆಸಕ್ತ ಸ್ಪರ್ಧಾಳುಗಳು ಭಾಗವಹಿಸಬಹುದಾಗಿದೆ ಎಂದರು.

ಅ.30ರಂದು ಭಾನುವಾರ ಬೆಳಗ್ಗೆ 10.30ರಿಂದ ಮಧ್ಯಾಹ್ನ 1 ಗಂಟೆವರೆಗೆ ಮೈಸೂರು ದಸರಾ ವಸ್ತುಪ್ರದರ್ಶನದ ಪಿ. ಕಾಳಿಂಗರಾವ್ ಗಾನಮಂಟಪದಲ್ಲಿ ನಡೆಯಲಿದೆ. 8 ವರ್ಷ ದಿಂದ 12ವರ್ಷ, 12 ವರ್ಷ ದಿಂದ 18 ವರ್ಷ,

18 ವರ್ಷದಿಂದ ಮೇಲ್ಪಟ್ಟವರಿಗೆ ಚಿತ್ರಕಲಾ ಸ್ಫರ್ಧೆಯ ವಿಷಯ: ಪರಿಸರ ಬೆಟ್ಟಗುಡ್ಡಗಳು ನದಿಕೆರೆ ವನ್ಯಜೀವಿಗಳು ಅಭಯಾರಣ್ಯ ಜಲಪಾತ ನಿಸರ್ಗಕ್ಕೆ ಸಂಬಂಧಿಸಿದ್ದಾಗಿರಬೇಕು. ಮೂರೂ ವಿಭಾಗದಲ್ಲೂ ಮೊದಲನೇ, ದ್ವಿತೀಯ ಹಾಗೂ ತೃತೀಯ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು.

ಸ್ಪರ್ಧಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರ ನೀಡಲಾಗುತ್ತದೆ. ಪ್ರವೇಶ ಉಚಿತವಾಗಿದ್ದು, ಚಿತ್ರ ರಚನೆಗೆ ಅಗತ್ಯವಿರುವ ಕಾರ್ಡ್ಬೋರ್ಡ್ ಮಾತ್ರ ನೀಡಲಾಗುವುದು, ಕಲರ್ಸ್, ವಾಟರ್ ಪೇಟಿಂಗ್ ಸೇರಿದಂತೆ ಅವಶ್ಯಕ ಪದಾರ್ಥಗಳನ್ನು ಸಂಬಂಧಿಸಿದ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು ಹೆಚ್ಚಿನ ವಿವರಗಳಿಗೆ 9880752727/ 7829067769 ಸಂಪರ್ಕಿಸಬಹುದಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು